ಬಾಗಲಕೋಟೆ: ದೆಹಲಿಯಲ್ಲಿ ಸಾಽಸಿರುವ ಈ ಪ್ರಮುಖ ಗೆಲುವು ಪಕ್ಷ, ರಾಷ್ಟç ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನವ ಭಾರತ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನ ಗೆಲುವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಽಸಿದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ವಿಜೆಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೨೭ ವರ್ಷಗಳ ನಂತರ ರಾಷ್ಟçದ ರಾಜಧಾನಿಯಲ್ಲಿ ಬಿಜೆಪಿ ಗೆಲುವು ಸಾಽಸಿದ್ದು, ಇದು ಅಲ್ಲಿನ ಕಾರ್ಯಕರ್ತರ ಹಾಗೂ ಪ್ರಧಾನಿ ಮೋದಿ ಸಂತಸ ಉಂಟು ಮಾಡಿದೆ. ಭಾರತದ ಉಜ್ಜಲ ಭವಿಷ್ಯಕ್ಕೆ ದ್ಯೋತಕವಾಗಿದೆ. ಮುಂದೆ ಬಿಹಾರ ಮತ್ತು ಕರ್ನಾಟಕದಲ್ಲಿಯೂ ಭಾರತೀಯ ಜನತಾ ಪಕ್ಷ ಅಽಕಾರ ಹಿಡಿಯಲಿದೆ. ಆ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕಾರ್ಯೋನ್ಮುಖರಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಕ್ರೇಜಿವಾಲ್ ಅಣ್ಣಾ ಹಜಾರೆ ಗರಡಿಯಲ್ಲಿ ಬಂದರು ಪರಿಶುದ್ದರಾಗಿ ಉಳಿಯದೆ ಭ್ರಷ್ಟ ಮುಖ್ಯಮಂತ್ರಿಯೆAದು ಹೆಸರು ಪಡೆದ ಪರಿಣಾಮ ದೆಹಲಿಯಲ್ಲಿ ಸೋಲು ಕಾಣಬೇಕಾಯಿತು. ೭೦ ಕ್ಷೇತ್ರದಲ್ಲಿ ೪೮ ಅಭ್ಯರ್ಥಿಗಳನ್ನು ಗೆದ್ದ ಭಾರತೀಯ ಜನತಾ ಪಕ್ಷ ೨/೩ಅಂಶ ನಿಶ್ಚಳ ಬಹುಮತ ಪಡೆದುಕೊಂಡು ಸರ್ಕಾರ ರಚನೆ ಮಾಡಲಿದೆ. ಈ ಗೆಲವು ಭಾರತೀಯರ ಗೆಲವು ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ, ಬಸವರಾಜ ಯಂಕAಚಿ ಮಾತನಾಡಿದರು. ಲಕ್ಷಿ÷್ಮÃ ನಾರಾಯಣ ಕಾಸಟ್, ಸತ್ಯನಾರಾಯಣ ಹೆಮಾದ್ರಿ, ಮಹೇಶ ಅಥಣಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ್, ಜ್ಯೋತಿ ಭಜಂತ್ರಿ, ಭಾಗ್ಯಶ್ರೀ ಹಂಡಿ, ಶಶಿಕಲಾ ಮಜ್ಜಗಿ, ಭಾಗೀರಥಿ ಪಾಟೀಲ, ಬಸವರಾಜ ಅವರಾದಿ, ಯಲ್ಲಪ್ಪ ನಾರಾಯಣಿ, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಅಶೋಕ ಪವಾರ, ದೂಳಪ್ಪ ಕೊಪ್ಪದ, ಆನಂದ ಕೋಟಗಿ, ಚಂದ್ರು ಸರೂರ, ರಾಘವೇಂದ್ರ ಕುಲಕರ್ಣಿ ಇದ್ದರು.