ಬಾಗಿನ ಸಮರ್ಪಣೆ ಕಾರ‌್ಯದಲ್ಲಿ ರಾಜಕೀಯ ಹುಡುಕುವುದಿಲ್ಲ

blank

ಚಿತ್ರದುರ್ಗ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿ ಸಾಗರದಲ್ಲಿ ಜ.23ರಂದು ಬಾಗಿನ ಅರ್ಪಣೆ ಕಾರ‌್ಯಕ್ರಮದಲ್ಲಿ ನಾನು ಯಾ ವುದೇ ರಾಜಕಾರಣ ಹುಡುಕುವುದಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ ರು.
ಮೂರನೇ ಬಾರಿಗೆ ಕೊಡಿ ಬಿದ್ದಿರುವ ವಿವಿ ಸಾಗರ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ಅಧಿಕಾರದಲ್ಲಿ ಇರುವವರು ಬಾಗಿನ ಅರ್ಪಿಸುವುದು ಸಹಜ. ಮೈಸೂರು ಸಂಸ್ಥಾನಕ್ಕೂ ಈ ಭಾಗಕ್ಕೂ ಅವಿನಾಭಾವ ಸಂಬಂಧವಿದೆ.
ಈ ಪ್ರದೇಶದ ಜನರಿಗೆ ನೀರು ಒದಗಿಸಲು ಹಿಂದೆ ಜಲಾಶಯ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರ ಆಹ್ವಾನದ ಮೇರೆಗೆ ನಾ ನಿಂದು ಬಾಗಿನ ಅರ್ಪಿಸಿ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸಿದ್ದೇನೆಂದು,ಸಿಎಂ ಬಾಗಿನ ಸಮರ್ಪಣೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಭಾರತ ಸಪ್ತ ಸಿಂಧೂ ನದಿಗಳ ನಾಡು,ವರುಣನ ಕೃಪೆಯಿಂದ ವಿವಿ ಸಾಗರ ಜಲಾಶಯ ಮತ್ತೆ ಭರ್ತಿಯಾಗಿದೆ ಎಂ ದರು.
ಬಿಜೆಪಿ ಒಳಜಗಳ ಕುರಿತಂತೆ ಎಲ್ಲ ಸಮಸ್ಯೆಗಳು ಪಕ್ಷದ ಚೌಕಟ್ಟು,ಒಳಗೆ ಚರ್ಚೆಯಾಗಬೇಕು. ನಾಯಕರು ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು. ಕುರ್ಚಿ ಕುರಿತಂತೆ ಕಾಂಗ್ರೆಸ್ಸನಲ್ಲೂ ನಡೆದಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಸಂಸದರು,ಕುರ್ಚಿಗಳು ಕಡಿಮೆ ಆಕಾಂಕ್ಷಿಗಳು ಜಾಸ್ತಿ.
ಯಾರಿಗೆ ಸಾಮಥ್ಯ ಇರುತ್ತದೆಯೋ ಅವರಿಗೆ ಕುರ್ಚಿ ಸಿಗುತ್ತದೆ ಎಂದರು. ಭಾರತದ ಸಮಸ್ತ ಜನರನ್ನು ಹೇಗೆ ದಿಕ್ಕು ತಪ್ಪಿಸಲಾಗುತ್ತಿದೆ ಎಂಬುದನ್ನು ವಿವರಿಸುವ ಸಲುವಾಗಿ ಚಿತ್ರದುರ್ಗದಲ್ಲಿ ಸಂವಿಧಾನ ಸಮ್ಮಾನ್ ಗೌರವ ಕಾರ‌್ಯಕ್ರಮ ಆಯೋಜಿಸಿರುವ ಕಾರ‌್ಯಕ್ರಮದಲ್ಲಿ ಪಾ ಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.

Share This Article

ಕ್ರೆಡಿಟ್​ ಕಾರ್ಡ್​ ಬಳಸುತ್ತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ, ಇಲ್ಲದಿದ್ರೆ… | Credit Cards

Credit Cards: ಇಂದಿನ ಡಿಜಿಟಲ್​ ಯುಗದಲ್ಲಿ ಬಹುತೇಕರು ಕ್ರೆಡಿಟ್​ ಕಾರ್ಡ್ ಬಳಕೆ ಮಾಡುತ್ತಾರೆ. ಪಡೆಯುವ ಉದ್ದೇಶ…

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…