ಚಿತ್ರದುರ್ಗ: ಬಸವಣ್ಣನವರ ಸಮಾಜ ಸುಧಾರಣೆಯ ದೃಷ್ಟಿಕೋನ ಮಹತ್ವವಾದದ್ದು ಎಂದು ಮೈಸೂರು ಶ್ರೀ ಕುಂದೂರು ಮಠದ ಡಾ.ಶ್ರೀ ಶರಶ್ಚಂದ್ರ ಸ್ವಾ ಮೀಜಿ ಹೇಳಿದರು.
ಮುರುಘಾ ಮಠದ ಬಸವ ಜಯಂತಿ ಅಂಗವಾಗಿ ಸೋಮವಾರ ಸಂಜೆ ಶ್ರೀ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಚಿಂತನ ಗೋಷ್ಠಿಯಲ್ಲಿ ಶರಣರ ದೃಷ್ಟಿಯಲ್ಲಿ ಬಸವಣ್ಣನವರು ಕುರಿತು ಮಾತನಾಡಿದರು.ಮಡಿವಾಳ ಮಾಚಿದೇವರು,ಚನ್ನಬಸವಣ್ಣ,ಅಲ್ಲಮಪ್ರಭು,ಅಕ್ಕಮಹಾದೇವಿ ಮೊದಲಾದ ಶರಣರು ಬಸವಣ್ಣನವರ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಶರಣಸಂಸ್ಕೃತಿಯ ನಿಜಾಚರಣೆಗಳು ಕುರಿತ ಮಾತನಾಡಿ,ಶ್ರೀಮಠವು ಶರಣ ಸಂ ಸ್ಕೃತಿಯೆಂಬ ಅರ್ಥಪೂರ್ಣ ವೇದಿಕೆಗೆ ಕಾರಣವಾಗಿದೆ. ನಾವುಗಳು ನುಡಿದಂತೆ ನಡೆಯಬೇಕು. ಬಸವತತ್ವಾಚರಣೆ,ಸಿದ್ದಾಂತಗಳನ್ನು ಅಳವಡಿ ಸಿಕೊಳ್ಳ ಬೇಕಿದೆ ಎಂದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ,ವಿಶ್ವಗುರು ಬಸವಣ್ಣ ಮತ್ತು ವಚನಕಾರರು ನಡೆದಂತಹ ದಾರಿಯಲ್ಲಿ ಮುರುಘಾ ಮಠದ ಶ್ರೀಗಳು ನಡೆದು ಕೊಂಡು ಬಂದಿದ್ದಾರೆ. ಶ್ರೀಮಠ ಅಕ್ಷರ,ಅನ್ನದಾಸೋಹ ಮಾಡುತ್ತ ಬಂದಿದೆ,ಸುಂದರ ಸಮಾಜ ನಿರ್ಮಾಣಕ್ಕೆ 17ನೇ ಶತ ಮಾನದಿಂದ ಅನೇಕ ವಿದ್ಯಾರ್ಥಿ ನಿಲಯ,ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದೆ ಎಂದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ,ಬಸವಣ್ಣನವರ ಜೀವನ ಮತ್ತು ವಚನ ಸಾರಗಳನ್ನು ಮಕ್ಕಳಿಗೆ ತಿಳಿಸಬೇಕಿದೆ.ಬಸವ ತತ್ತ್ವಗಳನ್ನು ಪಸ ರಿಸುವಂತೆ ಮಾಡಬೇಕಿದೆ. ಏಕತೆ,ಸಮಾನತೆ,ಶ್ರದ್ಧೆಯ ಕಾಯಕ ಸಮಾಜಕ್ಕೆ ನಾವು ಕೊಡಬಹುದಾದ ಕೊಡುಗೆಯಾಗಿದೆ ಎಂದರು.ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಗುರುಚರಮೂರ್ತಿಗಳು,ಎಸ್ಜೆಎಂ ವಿದ್ಯಾಪೀಠದ ವಿವಿಧ ಸಂಸ್ಥೆಯ ಮುಖ್ಯಸ್ಥರು ಮತ್ತಿತರರು ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಷಡಾಕ್ಷರಯ್ಯ ಸ್ವಾಗತಿಸಿ,ಸಿದ್ದೇಶ್ ವಂದಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.

ಸ್ಪರ್ಧಾ ವಿಜೇತರು
ವಚನಕಂಠ ಪಾಠ ಸ್ಪರ್ಧೆ(0-16 ವಯೋಮಾನ ವಿಭಾಗ).ಜಿ.ಟಿ.ಪ್ರತೀಕ್ಷಾ(ಪ್ರ)ಸ್ಪೂರ್ತಿ(ದ್ವಿ)ಯುಮುನಾದೇವಿ(ತೃ).ವಚನಕಂಠ ಪಾಠ ಸ್ಪರ್ಧೆ(17ವರ್ಷ ಮೀರಿದವರ ವಿಭಾಗ).ಗೀತಾರುದ್ರೇಶ್(ಪ್ರ),ತೃಪ್ತಿ(ದ್ವಿ)ಎಂ.ಆರ್.ಶಿಲ್ಪಾ(ತೃ)ಬಸವಾದಿ ಶರಣರ ಚಿತ್ರ ಬಿಡಿಸುವ ಸ್ಪರ್ಧೆ
ಸುಷ್ಮಾರಂಗಸ್ವಾಮಿ(ಪ್ರ),ಆರ್.ವೀರೆಂದ್ರ(ದ್ವಿ),ಜೆ.ಎನ್.ನಮಿತಾ(ತೃ).ರಂಗೋಲಿ ಸ್ಪರ್ಧೆಆರ್.ಕೆ.ಪ್ರೀತಿ(ಪ್ರ),ಸೌಮ್ಯ ವಿನಯ್ಪ್ರಸಾದ್(ದ್ವಿ) ಮಂಜುಳಾಹಿರೇಮಠ್(ತೃ).ಶಿವಶರಣರ ವೇಷಭೂಷಣ ಸ್ಫರ್ಧೆ(0-16 ವಯೋಮಾನ ವಿಭಾಗ)ಡಿ.ಜೆ.ಸೃಜನಾ(ಪ್ರ)ಚೇತನಾಪ್ರಿಯ(ದ್ವಿ)ಜೆ.ಎಲ್.ನಮಿತಾಶ್ರೀ(ತೃ) 17ರ ವಯೋಮಾನ ಮೀರಿದ ವಿಭಾಗದಲ್ಲಿ ಜಯದೇವ(ಪ್ರ),ಕೆ.ಪಿ.ತನುಜಾ(ದ್ವಿ),ಬಿ.ಜಿ.ಗೀತಾ(ತೃ)ಹಾಗೂ ಡಿ.ಎಸ್.ಸಿದ್ದೇಶ್ ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.
—-