ಬಯಲಲ್ಲೇ ಶೌಚ, ಸೀರೆ ಮರೆಯಲ್ಲಿ ಸ್ನಾನ

blank

ಮುಗದಾಳಬೆಟ್ಟ ಗ್ರಾಮದ ಗೊಲ್ಲರಹಟ್ಟಿಯಲ್ಲಿ ದಯನೀಯ ಸ್ಥಿತಿ, ಸೌಲಭ್ಯ ಕಲ್ಪಿಸಲು ಅಧಿಕಾರಿಗಳ ರ್ನಿಲಕ್ಷ

ರಾಮಕೃಷ್ಣ ನಾಯ್ಕ ಬಿ.ವಿ ಪಾವಗಡ
ಬಯಲಲ್ಲೇ ಶೌಚ, ಸೀರೆ ಮರೆಯಲ್ಲಿ ಸ್ನಾನ, ಚರಂಡಿ, ರಸ್ತೆ, ಬೀದಿ ದೀಪವಿಲ್ಲದೆ ಪಡಿಪಾಟಲು, ಕುಡಿಯುವ ನೀರು, ವಸತಿ, ಅಂಗನವಾಡಿ ಕೇಂದ್ರ ಇಲ್ಲದೇ ಪರದಾಟ… ಇದು, ಮುಗದಾಳಬೆಟ್ಟ ಗ್ರಾಮದ ಗೊಲ್ಲರಹಟ್ಟಿ ಕಥೆ&ವ್ಯಥೆ.
ತಾಲೂಕಿನ ನಿಡಗಲ್​ ಹೋಬಳಿ ಕೊಂಡೆತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗದಾಳಬೆಟ್ಟ ಗ್ರಾಮದ ಗೊಲ್ಲರಹಟ್ಟಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿದ್ದು, ಸೌಲಭ್ಯ ವಂಚಿತವಾಗಿವೆ. ಇಲ್ಲಿ ತಲೆತಲಾಂತರದಿಂದ ವಾಸಿಸುತ್ತಿದ್ದರೂ ಮನೆಗಳಿಗೆ ಖಾತೆ ಮಾಡಿಕೊಡಲು ಗ್ರಾಪಂ ಅಧಿಕಾರಿಗಳು ರ್ನಿಲಕ್ಷ್ಯ ವಹಿಸಿದ್ದರಿಂದ ಸರ್ಕಾರದ ಸೌಲಭ್ಯ ಗಗನಕುಸುಮವಾಗಿದೆ.
ಕೇಂದ್ರ ಸರ್ಕಾರ ಸ್ವಚ್ಛ ಭಾರತ್​ ಮಿಷನ್​ ಯೋಜನೆಯಡಿ ಮನೆಗೊಂದು ಶೌಚಗೃಹ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಿ, ಶೌಚಗೃಹ ನಿಮಾರ್ಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಕೊಂಡೆತಿಮ್ಮನಹಳ್ಳಿ ಗ್ರಾಪಂ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ಮೂಲಸೌಕರ್ಯ ದೂರದ ಮಾತಾಗಿದೆ.

ಅಧಿಕಾರಿಗಳ ರ್ನಿಲಕ್ಷ್ಯ:
ಗ್ರಾಪಂನಿಂದ ಶೌಚಗೃಹ ನಿರ್ಮಿಸಿಕೊಡಲು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳ ರ್ನಿಲಕ್ಷ್ಯದಿಂದ ಜನರ ಬೇಡಿಕೆ ಈಡೇರುತ್ತಿಲ್ಲ. ಗ್ರಾಮದಲ್ಲಿ ಹೆಣ್ಣುಮಕ್ಕಳು ಶೌಚ ಹಾಗೂ ಸ್ನಾನದ ಗೃಹವಿಲ್ಲದ ಕಾರಣ ಬಯಲಲ್ಲೇ ಶೌಚ ಮತ್ತು ಚಪ್ಪಡಿ ಕಲ್ಲುಗಳಿಗೆ ಸೀರೆ ಸುತ್ತಿಕೊಂಡು ಮತ್ತು ಮರದ ಬಳ್ಳಿಗಳ ತಡಿಕೆಯ ಮರೆಯಲ್ಲಿ ಸ್ನಾನ ಮಾಡುವ ದಯನೀಯ ಸ್ಥಿತಿ ಇದೆ.

ಪುಂಡರಿಂದ ಬಹಿರ್ದೆಸೆ ಚಿತ್ರೀಕರಣ!
ಸಂಜೆ ವೇಳೆ ಹೆಣ್ಣುಮಕ್ಕಳು, ಮಹಿಳೆಯರು ಪಕ್ಕದ ಬೀಳು ಹೊಲಗಳಲ್ಲಿ ಬಹಿರ್ದೆಸೆಗೆ ಹೋದರೆ ಪುಂಡರು ಮೊಬೈಲ್​ನಲ್ಲಿ ೋಟೋ, ವಿಡಿಯೋ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ತಕ್ಷಣ ಪರಿಹಾರ ದೊರಕಿಸಿಕೊಡುವಂತೆ ಗ್ರಾಮದ ಮಹಿಳೆಯರು ಆಗ್ರಹಿಸುವ ಜತೆಗೆ ನೋವು ತೋಡಿಕೊಂಡಿದ್ದಾರೆ.

ಬಯಲಲ್ಲೇ ಶೌಚ, ಸೀರೆ ಮರೆಯಲ್ಲಿ ಸ್ನಾನ

ನೀರಿಗಾಗಿ ಪರದಾಟ:
ಹಟ್ಟಿಯಲ್ಲಿ ಒಂದೇ ನೀರಿನ ಟ್ಯಾಂಕ್​ ಇದ್ದು, 2 ದಿನಕ್ಕೊಮ್ಮೆ ದಿನ ಬಳಕೆಗೆ ಮತ್ತು ಕುಡಿಯುವುದಕ್ಕೆ ನೀರು ಬಿಡುತ್ತಾರೆ. ಜಲ ಜೀವನ ಮಿಷನ್​ ಯೋಜನೆಯಡಿ ದೇಶಕ್ಕೆಲ್ಲ ನಲ್ಲಿಗಳನ್ನು ಹಾಕಿ ನೀರು ಬಿಡಲಾಗುತ್ತಿದೆ. ಆದರೆ ಈ ಗೊಲ್ಲರ ಹಟ್ಟಿಗೆ ಜೆಜೆಎಂ ಕಾಮಗಾರಿಯೇ ಮಾಡಿಲ್ಲ. ಇದರಿಂದ ಹಟ್ಟಿಯ ಜನರು ಶುದ್ಧ ಕುಡಿಯುವ ನೀರಿಗಾಗಿ ಕಾಯುವ ಪರಿಸ್ಥಿತಿ ಬಂದೊದಗಿದೆ.

ಗುಡಿಸಲಲ್ಲೇ ವಾಸ:
ಮುಗದಾಳ ಬೆಟ್ಟ ಗ್ರಾಮದ ಗೊಲ್ಲರಹಟ್ಟಿಯಲ್ಲಿ 2012ರಲ್ಲಿ ಕೃಷ್ಣ ಕುಠೀರ ವಸತಿ ಯೋಜನೆಯಡಿ 10ಕ್ಕೂ ಹೆಚ್ಚು ಮನೆಗಳು ಮಂಜೂರಾಗಿದ್ದು, ಗ್ರಾಪಂನಿಂದ ನಿವೇಶನ ಮತ್ತು ಮನೆಗಳಿಗೆ ಖಾತೆ ಮಾಡಿಕೊಡದ ಕಾರಣ ವಸತಿ ಯೋಜನೆಯಿಂದ ವಂಚಿತವಾಗಿ ಇಂದಿಗೂ ಕಾಡು ಪ್ರಾಣಿಗಳು ದಾಳಿ ನಡೆಸುವ ಭಯದಲ್ಲೇ ಗುಡಿಸಿಲಿನಲ್ಲೇ ವಾಸಮಾಡುವಂತಾಗಿದೆ.

ಬಯಲಲ್ಲೇ ಶೌಚ, ಸೀರೆ ಮರೆಯಲ್ಲಿ ಸ್ನಾನ

ಮುಗದಾಳಬೆಟ್ಟ ಗ್ರಾಮವು ಬೆಟ್ಟದ ತಪ್ಪಲಿನಲ್ಲಿದ್ದು, 2.30 ಗುಂಟೆ ಜಮೀನಿನಲ್ಲಿ ಗೊಲ್ಲರಹಟ್ಟಿಯ 40ಕ್ಕೂ ಹೆಚ್ಚು ಮನೆ ನಿರ್ಮಿಸಿಕೊಂಡು ಗ್ರಾಪಂಗೆ 2013 ವರೆಗೆ ಕಂದಾಯ ಪಾವತಿಸಿದ್ದರು. ಖಾಸಗಿ ವ್ಯಕ್ತಿಗಳು ಜಮೀನು ನಮ್ಮದೆಂದು ಕೋರ್ಟು& ಕಚೇರಿಗೆ ಅಲೆದಾಡಿ ಕೊನೆಗೆ ಪಾವಗಡದ ಸಿವಿಲ್​ ಕೋರ್ಟ್​, ಎಸಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಲಯದಲ್ಲಿ 166/1 ರಲ್ಲಿರುವ 2.30 ಗುಂಟೆ ಜಮೀನು ಗೊಲ್ಲರಹಟ್ಟಿಗೆ ಸೇರಿದ್ದು ಎಂದು ಆದೇಶಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ರ್ನಿಲಕ್ಷ್ಯದಿಂದ ಮತ್ತು ಖಾಸಗಿ ಜಮೀನು ಮಾಲೀಕರ ಒತ್ತಡದಿಂದ ಮನೆಗಳಿಗೆ ಮತ್ತು ನಿವೇಶನಗಳಿಗೆ ಖಾತೆ ಮಾಡಿಕೊಟ್ಟಿಲ್ಲ. ಇದರಿಂದ ಗೊಲ್ಲರಹಟ್ಟಿಗೆ ಸೌಕರ್ಯವಿಲ್ಲದಂತಾಗಿದೆ.
| ಸಿ.ರಾಮಪ್ಪ, ವಕೀಲ

ಮುಂಜಾನೆ ಮತ್ತು ಸಂಜೆ ಹೊತ್ತಾದರೆ ಕರಡಿಗಳ ಕಾಟ. ಭಯದಿಂದಲೇ ಬಹಿರ್ದೆಸೆಗೆ ತೆರಳುವಂತಾಗಿದೆ. ಹಟ್ಟಿಗೆ ಬಚ್ಚಲುಮನೆ ಇಲ್ಲದೆ ಚಪ್ಪಡಿ ಕಲ್ಲಿಗೆ ಸೀರೆ ಸುತ್ತಿಕೊಂಡು ಸ್ನಾನಮಾಡಿ ಮಾನ ಉಳಿಸಿಕೊಳ್ಳುತ್ತಿದ್ದೇವೆ.
|  ಭಾಗ್ಯಲಕ್ಷ್ಮೀ, ಗೊಲ್ಲರಹಟ್ಟಿ ಗ್ರಾಮದ ಮಹಿಳೆ

ವಿದ್ಯಾಭ್ಯಾಸಕ್ಕೆಂದು ಮಕ್ಕಳನ್ನು ವಸತಿ ಶಾಲೆಗಳಲ್ಲಿ ದಾಖಲಿಸಿ ಮನೆಯಲ್ಲಿ ಒಬ್ಬಂಟಿಯಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಈಗ ಶಾಲಾ-&ಕಾಲೇಜಿಗೆ ರಜೆ ಬಂದಿದ್ದು, ಗ್ರಾಮದ ಯಾವ ಮನೆಗೂ ಶೌಚಗೃಹವಿಲ್ಲದ ಕಾರಣ ಹೆಣ್ಣುಮಕ್ಕಳ ಪರಿಸ್ಥಿತಿ ಹೇಳತೀರದಂತಾಗಿದೆ. ನೆಂಟರ ಮನೆಗಳಿಗೆ ಕಳುಹಿಸುವ ಪರಿಸ್ಥಿತಿ ನಿಮಾರ್ಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಹಟ್ಟಿಯ ಮನೆಗಳಿಗೆ ಖಾತೆ ಮಾಡಿಕೊಟ್ಟು ಶೌಚಗೃಹ ಸೇರಿ ಮೂಲ ಸೌಕರ್ಯ ಕಲ್ಪಿಸಿಕೊಡಲಿ.
|  ಗೌರಮ್ಮ, ಗೊಲ್ಲರಹಟ್ಟಿ ಗ್ರಾಮಸ್ಥೆ

ಪಾವಗಡ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಪಂಚಾಯಿತಿಯಿಂದ ಕುಡಿಯುವ ನೀರು, ಬೀದಿ ದೀಪ ನಿರ್ವಹಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಾದ ಸಿ.ಸಿ ರಸ್ತೆ, ಚರಂಡಿ, ಶೌಚಗೃಹ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಖಾಸಗಿ ವ್ಯಕ್ತಿ ನರಸಿಂಹಪ್ಪ ಅವರರಿಂದ ಜಮೀನು ನಮ್ಮದೆಂದು ತಕರಾರು ದೂರ ಅರ್ಜಿ ನೀಡುತ್ತಿದ್ದಾರೆ. ಹಾಗಾಗಿ ಮೂಲ ಸೌಕರ್ಯ ಒದಗಿಸಲಾಗಿಲ್ಲ.
| ಮಂಜುನಾಥ್​ ಪಿಡಿಒ, ಕೆ.ಟಿ ಹಳ್ಳಿ ಗ್ರಾಪಂ

ಮುಗುದಾಳ ಬೆಟ್ಟ ಗೊಲ್ಲರಹಟ್ಟಿಯಲ್ಲಿ ಮೂಲ ಸೌಕರ್ಯ ಸಮಸ್ಯೆ ಇರೋದು ನಿಜ. ಗೊಲ್ಲರಹಟ್ಟಿಯಿಂದ ಖಾತೆ ಮಾಡಿಕೊಳ್ಳುವಂತೆ ಅನೇಕ ಬಾರಿ ಮನವಿ ಸಹ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಮೂಲಸೌಕರ್ಯ ಒದಗಿಸಲು, ಖಾತೆ ಮಾಡಿಕೊಡಲು ಖಾಸಗಿ ವ್ಯಕ್ತಿ ನರಸಿಂಹಪ್ಪ ಜಮೀನು ನಮ್ಮದೆಂದು ಪದೇಪದೆ ತಕರಾರು ದೂರು ಅರ್ಜಿ ನೀಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಗೊಲ್ಲರಟ್ಟಿ ಸಮಸ್ಯೆಯನ್ನು ಪರಿಹರಿಸಬೇಕಿದೆ.
| ನರಸಿಂಹಪ್ಪ ಅಧ್ಯರು ಕೆ.ಟಿ.ಹಳ್ಳಿ ಗ್ರಾಪಂ

 

 

Share This Article

ಮೆಂತೆ, ಕರಿಬೇವನ್ನು ಈ ರೀತಿ ಬಳಸಿ, ಹೇರ್​ ಫಾಲ್​​ಗೆ ಗುಡ್​ ಬಾಯ್​​ ಹೇಳಿ | Hair fall

Hair fall: ಈಗೀನ ಕಾಲದಲ್ಲಿ ಎಲ್ಲಾ ಜನರು ಕೂದಲು ಉದುರುವುದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕೂದಲು…

ವೈರಲ್ ಆಗುತ್ತಿರುವ ಬೀಟ್‌ರೂಟ್ ಗಂಜಿ, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ: ನೀವು ಒಮ್ಮೆ ಟ್ರೈ ಮಾಡಿ | Beetroot Porridge

Beetroot Porridge: ಬೀಟ್‌ರೂಟ್‌ ಗಂಜಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್​​ ವೈರಲ್​ ಆಗುತ್ತಿದೆ. ಈ ಬೀಟ್‌ರೂಟ್…

ನೀವು ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ನೀವು ಈ ಸಲಹೆಗಳನ್ನು ಅನುಸರಿಸಲೇಬೇಕು…Acidity

Acidity: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಳಲುತ್ತಿರುವ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ. ಇದಕ್ಕಾಗಿ ಹಲವು…