ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಳ

blank

ಕಲಬುರಗಿ: ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಳವಾಗುತ್ತದೆ ಎಂದು ಹಿರಿಯ ವಿದ್ವಾಂಸ ಪಂ. ರಾಮಾಚಾರ್ಯ ಅವಧಾನಿ ಅಭಿಮತ ವ್ಯಕ್ತಪಡಿಸಿದರು.
ಜಯತೀರ್ಥ ಕಲ್ಯಾಣ ಮಂಟಪದಲ್ಲಿ ದಿ. ಭೀಮಸೇನರಾವ ಲಾತೂರಕರ್ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮುಖಂಡರಾದ ಭೀಮಸೇನರಾವ ಮಾಡ್ಯಾಳಕರ್, ನ್ಯಾಯವಾದಿ ಕಲ್ಯಾಣರಾವ ಭಕ್ಷಿ ಅವರಿಗೆ ವಿಪ್ರ ಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜಕ್ಕಾಗಿ ಉತ್ತಮ ಕಾರ್ಯ ನಿರ್ವಹಿಸುವವರನ್ನು ಗುರುತಿಸಿ ಸನ್ಮಾನಿಸಬೇಕು. ದುಮಾರ್ಗ ಹಿಡಿದವರನ್ನು ನಿರ್ಧಾಕ್ಷಿಣ್ಯವಾಗಿ ಖಂಡಿಸಬೇಕು. ಸಮಾಜ ಘಾತುಕರನ್ನು ಯಾವತ್ತೂ ಗೌರವಿಸಬಾರದು ಎಂದು ಕಿವಿ ಮಾತು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷ ಬಿ.ವಿ.ಮಾಡ್ಯಾಳಕರ್, ಹಿರಿಯ ನ್ಯಾಯವಾದಿ ಕಲ್ಯಾಣರಾವ ಭಕ್ಷಿ, ನಮ್ಮ ಅಳಿಲು ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪಂ.ರಾಮಾಚಾರ್ಯ ಅವಧಾನಿ, ಪಂ.ಧ್ವೈಯಪಾಯನಾಚಾರ್ಯ ಕೋಥಳಿ, ವಿಶ್ವ ಮಧ್ವಮಹಾ ಪರಿಷತ್ ಜಿಲ್ಲಾಧ್ಯಕ್ಷ ರಾಮಾಚಾರ್ಯ ಮೋಘರೆ, ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನರಹರಿ ಪಾಟೀಲ್, ಉದ್ಯಮಿ ಸಂಜಯ ಗುಪ್ತಾ, ಪ್ರಹ್ಲಾದ ಮಟಮಾರಿ, ಪ್ರಸಾದ ಮಹಿಪತಿ, ಮಾರ್ಥಂಡ ಶಾಸ್ತ್ರಿ, ಜಯರಾವ ದೇಶಪಾಂಡೆ, ಕೃಷ್ಣ ಜೋಶಿ, ಪ್ರಹ್ಲಾದ ಪೂಜಾರಿ, ಚಂದ್ರಕಾಂತ ದೇಶಮುಖ, ಅರುಣ ಮಳೂರ, ಡಾ.ಗಿರೀಶ ಗಲಗಲಿ, ಸಮೀರ ದೇಶಪಾಂಡೆ, ಹಿರಿಯ ನ್ಯಾಯವಾದಿ ರಾಘವೇಂದ್ರ ನಾಡಗೌಡ, ವಾಸುದೇವ ಮುಂಡರಗಿ, ವಿಜಯಕುಮಾರ ಕುಲಕಣರ್ಿ, ವಿಶ್ವನಾಥ ಕುಲಕಣರ್ಿ, ಅಡವಿರಾವ ದೇಶಪಾಂಡೆ, ರವಿ ಲಾತೂರಕರ್, ಶಾಮಾಚಾರ್ಯ ಬೈಚಬಾಳ, ಶ್ರೀನಿವಾಸಾಚಾರ್ಯ, ಕೆ.ಬಿ. ಕುಲಕಣರ್ಿ, ಛಾಯಾ ಮುಳೂರ, ಜ್ಯೋತಿ ಲಾತೂರಕರ್, ಉಪಸ್ಥಿತರಿದ್ದರು. 
ದೀಪಾ ಆವಂತಿ ಪ್ರಾರ್ಥಿಸಿದರು. ಜಯತೀರ್ಥ ಎಜುಕೇಷನನಲ್, ರಿಲೀಜಿಯಸ್ ಚಾರಿಟೇಬಲ್ ಅಧ್ಯಕ್ಷ ಬಾಲಕೃಷ್ಣ ಲಾತೂರಕರ್ ಸ್ವಾಗತಿಸಿದರು. ಕಾರ್ಯದರ್ಶಿ  ರವಿ ಲಾತೂರಕರ್ ವಂದಿಸಿದರು. ವ್ಯಾಸರಾಜ ಸಂತೆಕೆಲ್ಲೂರ ನಿರೂಪಣೆ ಮಾಡಿದರು.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…