ಚಿತ್ರದುರ್ಗ:ಬಸವ ಜಯಂತಿ ಅಂಗವಾಗಿ ಮುರುಘಾ ಮಠದಲ್ಲಿ ಮಂಗಳವಾರ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಾನ್ನಿಧ್ಯ ವ ಹಿಸಿದ್ದ ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ,ಬಸವಣ್ಣನವರ ಕುರಿತು ನಾವು ಎಷ್ಟು ವಿಚಾರ ಗಳನ್ನು ತಿಳಿದರೂ ಅದು ಕಡಿಮೆಯೇ ಎಂದು ಅಭಿಪ್ರಾಯಪಟ್ಟರು.
ಸರ್ವ ಶರಣರ ದೃಷ್ಟಿಯಲ್ಲಿ ಬಸವಣ್ಣ ವಿಷಯಾಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ,ಚಿತ್ರದುರ್ಗ,ಬಳ್ಳಾರಿ,ಕೊಪ್ಪಳ,ವಿಜಯನಗರ ಶಿವ ಮೊಗ್ಗ,ರಾಯಚೂರು,ಕಲಬುರುಗಿ ಮತ್ತಿತರ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಧಾರಿತ ಭಾಷಣ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ,ತಿಳವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮೀಜಿ ಹಾಗೂ ಕಲ್ಕರೆಯ ಶ್ರೀ ಪೂರ್ಣನಂದಾ ಸ್ವಾ ಮೀಜಿ ಇತರರು ಇದ್ದರು. ಡಾ.ಬಿ.ರೇವಣ್ಣ,ಡಾ.ಎಸ್.ಎಚ್.ಪಂಚಾಕ್ಷರಿ,ರುದ್ರಮೂರ್ತಿ,ನವೀನ್ ಮಸ್ಕಲ್ ಹಾಗೂ ಎಸ್ಜೆಎಂ ಕಾಲೇಜು ಸಿಬ್ಬಂ ದಿ ಸ್ಪರ್ಧೆಗಳ ಉಸ್ತುವಾರಿ ವಹಿಸಿದ್ದರು.
————–
