ಬಾಗಲಕೋಟೆ: ಯಾಕೋ ಏನೋ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರಿಗೆ ನಮ್ಮ ದೇಶಕ್ಕಿಂತಲೂ ಒಂದು ಸಮುದಾಯದ ಮತಗಳೇ ಮುಖ್ಯವಾಗಿವೆ ಎನ್ನಿಸುತ್ತಿದೆ. ಅವರು ನಮ್ಮ ಭಾರತದ ಮುಸ್ಲಿಂರ ಬಗ್ಗೆ, ದೇಶದ ಪಶ್ಮಂದಾ ಮುಸ್ಲಿಂರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರೆ ಅವರನ್ನು ಗೌರವಿಸುತ್ತಿದ್ದೆ. ಆದರೆ, ಕಾಂಗ್ರೆಸ್ನವರಿಗೆ ಪಾಕಿಸ್ತಾನದ ಮುಸ್ಲಿಂರ ಕಳಕಳಿ ಹೆಚ್ಚಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಕಾರಜೋಳ, ರಾಹುಲ್ ಗಾಂಽ ಅವರು ಕಾಶ್ಮೀರಿ ಪಂಡಿತರ ಕುಟುಂಬದ ವಂಶಸ್ಥರು ಎಂದು ಅವರಿಗೆ ಗೌರವ ಇದೆ. ಆದರೆ, ೬.೫ ಲಕ್ಷ ಕಾಶ್ಮೀರಿ ಪಂಡಿತರಿಗೆ ಉಗ್ರಗಾಮಿಗಳು ಚಿತ್ರಹಿಂಸೆ ಕೊಟ್ಟು ಓಡಿಸಿದರು. ಅವರೆಲ್ಲ ಇವತ್ತಿಗೂ ನಿರಾಶ್ರಿತರ ಕಾಲನಿ, ಕೇಂದ್ರಗಳಲ್ಲಿ ಇದ್ದಾರೆ. ಅವರ ಬಗ್ಗೆ ಕಾಂಗ್ರೆಸ್ ಆಗಲಿ, ರಾಹುಲ್ ಗಾಂಽಯಾಗಲಿ ಕಾಳಜಿ ತೋರಿಸಿಲ್ಲ ಎಂದರು.
ಇನ್ನು ಕೆಲವರು ಯುದ್ಧ ಮುಖ್ಯವಲ್ಲ ಎನ್ನುತ್ತಾರೆ. ಯುದ್ಧ ಮಾಡದೇ ೪೪ ಸಾವಿರ ಜನರನ್ನು ಕಾಂಗ್ರೆಸ್ ಆಡಳಿತ ಅವಽಯಲ್ಲಿ ಉಗ್ರಗಾಮಿಗಳು ಕೊಂದರು. ಅದರ ಬಗ್ಗೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಽ ಮಾತನಾಡಲ್ಲ. ಇದನ್ನು ದೇಶ ಮತ್ತು ನಾಡಿನ ಜನರು ಅರ್ಥ ಮಾಡಿಕೊಳ್ಳಬೇಕು. ದೇಶದ ೧೪೦ ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಉಗ್ರರ ವಿರುದ್ಧ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಉಗ್ರರು ಪಹಲ್ಗಾಮ್ನಲ್ಲಿ ೨೬ ಜನ ಅಮಾಯಕರನ್ನು ಜೀವ ಪಡೆದರೂ ಸಿದ್ದರಾಮಯ್ಯ ಅವರು ಯುದ್ಧ ಬೇಡ ಎಂದು ಸಹಾನುಭೂತಿಯಿಂದ ಮಾತನಾಡುತ್ತಾರೆ. ಅವರಿಗೆ ದೇಶದ ಐಕ್ಯತೆ, ಏಕತೆ, ಕಾಳಜಿ ಎಷ್ಟಿದೆ ಎನ್ನುವುದು ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಇವರಿಗೆ ಇರುವುದು ಓಟ್ ಬ್ಯಾಂಕ್ ಕಾಳಜಿ ಒಂದೇ. ಅದನ್ನು ಬಿಟ್ಟರೆ ಬೇರೆ ಯಾವುದೇ ಕಾಳಜಿ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿ ಮಂಡಳದ ಸದಸ್ಯರಿಗೆ ಇಲ್ಲವಾಗಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಅದೇ ನೆರೆಯ ತೆಲಂಗಾಣ ಮುಖ್ಯಮಂತ್ರಿಗಳು ಭಾರತ ಸರ್ಕಾರದ ಏನು ಕ್ರಮ ಕೈಗೊಂಡಿದೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸಿಎಂ ರೇವಂತರೆಡ್ಡಿ ಹೇಳಿದ್ದಾರೆ. ಅವರಿಗೆ ದೇಶದ ಬಗ್ಗೆ ಇರುವ ಕಾಳಜಿಯನ್ನು ಪ್ರಶಂಸಿಸುತ್ತೇನೆ ಎಂದು ಕಾರಜೋಳ ತಿಳಿಸಿದರು.
ರಾಜ್ಯ ಸರ್ಕಾರದ ಜಾತಿ ಗಣತಿ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ದೊಡ್ಡ ಕಲಾಕಾರ ಎಂದು ಕಾರಜೋಳ ವ್ಯಂಗ್ಯ ಮಾಡಿದರು.
ಸಿದ್ದರಾಮಯ್ಯ ಅವರಿಗೆ ತಮ್ಮ ಖುರ್ಚಿಗೆ ಯಾವಾಗ ಕಂಟಕ ಆಗುತ್ತದೆಯೋ ಆಗ ಜಾತಿ ಗಣತಿಯಂತ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾರೆ. ಹಿಂದು ಐದು ವರ್ಷ ಅಽಕಾರ ನಡೆಸಿದರು. ಈಗ ಎರಡು ವರ್ಷ ಅಽಕಾರದಲ್ಲಿ ಏನೂ ಮಾಡಲಿಲ್ಲ. ಈಗ ಕಾಂಗ್ರೆಸ್ ಪಕ್ಷದಲ್ಲಿ ಅವರ ಪ್ರತಿಸ್ಪಽð ಖುರ್ಚಿ ಖಾಲಿ ಮಾಡಿ ಎಂದು ಬೆನ್ನು ಹತ್ತಿದಾಗ ಇಂತ ಗಿಮಿಕ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಕಾಳಜಿ ಇಲ್ಲವೇ ಇಲ್ಲ. ಅವರಿಗೆ ಆ ಕಾಳಜಿ ಇದ್ದಿದ್ದರೆ ವೀರಶೈವ-ಲಿಂಗಾಯರನ್ನು ಅನೇಕ ಗುಂಪು ಮಾಡಿ ರಾಜ್ಯದ ಅತ್ಯಂತ ಸಣ್ಣ ಸಮುದಾಯ ಮಾಡಿ ಅವರ ಜನಸಂಖ್ಯೆ ಕೇವಲ ಶೇ.೪ ರಿಂದ ೫ ಎಂದು ಮಾಡಿದರು. ಅದೇ ರೀತಿ ಒಕ್ಕಲಿಗ ಮತ್ತು ಹಿಂದುಳಿದ ವರ್ಗದ ಕೆಲ ಜಾತಿಗಳನ್ನು ಮಾಡಿದ್ದಾರೆ. ಈ ಕ್ರಮವನ್ನು ಮುಸಲ್ಮಾನರಿಗೆ ಯಾಕೆ ಮಾಡಲಿಲ್ಲ? ನಿಜವಾಗಿಯೂ ಮುಸಲ್ಮಾನರಲ್ಲಿ ಶ್ರೀಮಂತ, ಬಡವ ಹಾಗೂ ದಲಿತ ಮುಸ್ಲಿಂ ಎಂದು ವಿಂಗಡನೆ ಮಾಡಬೇಕಿತ್ತು. ಮುಸ್ಲಿಂರಲ್ಲಿ ನಾಹಿ, ಮೆಹತರ, ಮೋಚಿ, ಚಪ್ಪರಬಂದ್, ನದಾ-ï, ಪಿಂಜಾರ, ಜಾತಕರ ಎನ್ನುವ ಮುಸ್ಲಿಂರು ಇದ್ದಾರೆ. ಆ ಬಡವರನ್ನು ವಿಂಗಡನೆ ಮಾಡಿ ಅವರಿಗೆ ಎಸ್ಸಿ, ಎಸ್ಟಿ ರೀತಿಯಲ್ಲಿ ಸೌಲಭ್ಯಕೊಟ್ಟು, ಮುಸ್ಲಿಂರಲ್ಲಿ ಇರುವ ದಲಿತ, ಕೆಳವರ್ಗದವರಿಗೆ ಸಹಾಯ ಮಾಡಿದ್ದರೆ ಸಿದ್ದರಾಮಯ್ಯ ಅವರನ್ನು ನಾನು ಹೊಗಳುತ್ತಿದ್ದೆ. ಆದರೆ, ಅವರಿಗೆ ಆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ವಕೀಲ ಶಿವಾನಂದ ಟವಳಿ ಇದ್ದರು.