ಪಡಿತರ ಪಡೆಯಲು ತಪ್ಪದ ಪರದಾಟ 

blank

 ಚೀಟಿಯಲ್ಲಿನ ಸಮಸ್ಯೆ, ಗೊಂದಲಕ್ಕೆ ಕಾರ್ಡ್​ದಾರರಿಗೆ ಸಂಕಷ್ಟ, ಸರ್ವರ ಸಮಸ್ಯೆಗೆ ಹೈರಾಣ

ಮಂಜುನಾಥರಾಜ್​ ಅರಸ್​ ಚಿಕ್ಕನಾಯಕನಹಳ್ಳಿ
ಅರ್ಹರ ಬಿಪಿಎಲ್​ ಪಡಿತರ ಕಾರ್ಡ್​ಗಳೇ ರದ್ದಾಗುತ್ತಿದ್ದರೆ ಮತ್ತೊಂದೆಡೆ ಪಡಿತರ ಚೀಟಿಯಲ್ಲಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಹಾರ ಪದಾರ್ಥ ಪಡೆಯಲು ಕಾರ್ಡ್​ದಾರರು ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪದೇಪದೆ ಸರ್ವರ್​ ಸಮಸ್ಯೆ, 1 ಲಕ್ಷಕ್ಕೂ ಅಧಿಕ ಆದಾಯ ಇದೆ ಅಥವಾ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್​ ಕಾರ್ಡ್​ ಹೊಂದಿ ದ್ದಾರೆ ಎಂಬ ಕಾರಣಕ್ಕೆ ಆಹಾರ ಇಲಾಖೆ ಯಿಂದ ಅರ್ಹರ ಬಿಪಿಎಲ್​ ಪಡಿತರ ಚೀಟಿ ರದ್ದಾಗಿರುವ ಸಮಸ್ಯೆ ನಡುವೆ ಈಗ ತಾಲೂಕಿನಲ್ಲಿ ಪಡಿತರದಾರರು ಮರಣ ಹೊಂದಿದವರ ಹೆಸರು ಕೈಬಿಟ್ಟು ಹೊಸಬರ ಸೇರ್ಪಡೆ ಮಾಡಲೂ ಸಾಧ್ಯವಾಗದೆ ಗ್ರಾಮಒನ್​, ಸೈಬರ್​ ಸೆಂಟರ್​ಗಳ ಬಳಿ ಅಲೆದಾಡುವಂತಾಗಿದೆ.
ಚಾಲ್ತಿಯಲ್ಲಿದ್ದಂತಹ ಪಡಿತರ ಚೀಟಿಗಳು ಇದ್ದಕ್ಕಿದ್ದಂತೆ ರದ್ದಾಗುತ್ತಿವೆ. ಈ ಬಾರಿ ಸ್ವೀಕೃತಗೊಂಡ ಬೆರಳಿನ ಗುರುತು ಮುಂದಿನ ಬಾರಿಗೆ ಸ್ವೀಕೃತವಾಗದಿರುವುದು, ಸರ್ವರ್​ ಹೋಗುತ್ತಿರುವುದು ಅಥವಾ ಕುಟುಂಬದವರ ಮಾಹಿತಿ ಸರಿಯಾಗಿ ಕಾಣಿಸದಿರುವುದು ಸೇರಿ ಅನೇಕ ಸಮಸ್ಯೆಗಳು
ಪಡಿತರದಾರರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ನಾಮಕೇವಾಸ್ತೆಗೆ ವಿತರಣೆ: ಈ ಹಿಂದೆ 2021ರಲ್ಲಿ ಸರ್ಕಾರದ ಆದೇಶದಂತೆ ಸರ್ಕಾರಿ ನೌಕರರು ಬಿಪಿಎಲ್​ ಪಡಿತರ ಚೀಟಿ ಹೊಂದಿದ್ದ 56 ಜನರು ಒಟ್ಟು 9.71 ಲಕ್ಷದ ರೂಪಾಯಿಗಳನ್ನು ಈಗಾಗಲೇ ಸರ್ಕಾರಕ್ಕೆ ದಂಡದ ರೂಪದಲ್ಲಿ ಪಾವತಿ ಮಾಡಿದ್ದಾರೆ. ಇದಕ್ಕೂ ಮುಂಚಿತವಾಗಿ 250 ಸರ್ಕಾರಿ ನೌಕರರು ಬಿಪಿಎಲ್​ ಕಾರ್ಡ್​ಗಳನ್ನು ಸರ್ಕಾರಕ್ಕೆ ವಾಪಸ್​ ನೀಡಿದ್ದಾರೆ. ಈ ರೀತಿಯ ಪಡಿತರ ಚೀಟಿಗಳ ಸಮಸ್ಯೆಗಳು ಒಂದು ರೀತಿಯಲ್ಲಾದರೆ ಹೊಸದಾಗಿ ಮಕ್ಕಳ ಹೆಸರುಗಳ ಸೇರ್ಪಡೆ, ತಿದ್ದುಪಡಿಗಳು, ನ್ಯಾಯಬೆಲೆ ಅಂಗಡಿಗಳ ಬದಲಾವಣೆ ಸೇರಿ ಇನ್ನಿತರ ಸಮಸ್ಯೆಗಳನ್ನು ನಾಗರಿಕರು ಎದರಿಸುತ್ತಿದ್ದಾರೆ. ಬಿಪಿಎಲ್​ ಹಾಗೂ ಅಂತ್ಯೋದಯ ಪಡಿತರ ಚೀಟಿಗಳಿಗೆ ಮಾತ್ರ ಅಕ್ಕಿ, ರಾಗಿ ವಿತರಣೆಯಾಗುತ್ತಿದ್ದು, ಎಪಿಎಲ್​ ಪಡಿತರ ಚೀಟಿಗಳನ್ನು ನಾಮಕೇವಾಸ್ತೆಗೆ ವಿತರಣೆ ಮಾಡಿದಂತಾಗಿದೆ. ತಾಲೂಕಿನಲ್ಲಿ ಈಗ ಅಂತ್ಯೋದಯ 4,529, ಬಿಪಿಎಲ್​ 51,917 ಹಾಗೂ ಎಪಿಎಲ್​ ಪಡಿತರಚೀಟಿಗಳು 5,506
ಗಳಿದ್ದು, ಒಟ್ಟು 61,952 ಪಡಿತರಚೀಟಿಗಳು ಚಾಲ್ತಿಯಲ್ಲಿವೆ.

1110 ಕಾರ್ಡ್​ಗಳು ರದ್ದು: ಚಿಕ್ಕನಾಯಕನಹಳ್ಳಿ ಒಂದೇ ತಾಲೂಕಿನಲ್ಲಿ ಆದ್ಯತಾ ಕುಟುಂಬದ ಪಡಿತರ ಚೀಟಿಗಳು (ಬಿಪಿಎಲ್​) ಆದಾಯತೆರಿಗೆ ಪಾವತಿದಾರರು ಎಂದು 287 , ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ವಾರ್ಷಿಕ ಆದಾಯವೆಂದು 121, ಸರ್ಕಾರಿ ನೌಕರರು ಎಂದು 25, ಆರು ತಿಂಗಳ ಕಾಲ ಪಡಿತರವನ್ನು ಪಡೆದಿಲ್ಲವೆಂಬ ಕಾರಣಕ್ಕೆ 677 ಪಡಿತರ ಚೀಟಿ ಸೇರಿ ಒಟ್ಟು 1110 ಪಡಿತರ ಚೀಟಿಗಳು ರದ್ದಾಗಿವೆ.

ಈ ಹಿಂದೆ ತಾಲೂಕಿನಲ್ಲಿ ಕೆಲವು ಕಾರಣಗಳಿಗೆ ಪಡಿತರಚೀಟಿಗಳು ರದ್ದಾಗಿದ್ದವು. ಆದರೆ ಈಗ ಸರ್ಕಾರದ ಹಾಗೂ ಸಚಿವರ ಆದೇಶದಂತೆ ರದ್ದಾಗಿರುವಂತಹ ಪಡಿತರಚೀಟಿಗಳನ್ನು ಚಾಲ್ತಿಗೊಳಿಸುತ್ತಿದ್ದು, ಅವರು ಪಡಿತರ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಇನ್ನು ಆನ್​ಲೈನ್​ನಲ್ಲಿ ಪಡಿತರ ಚೀಟಿಗಳ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅನರ್ಹರು ಪಡಿತರಚೀಟಿಗಳನ್ನು ಪಡೆದಿದ್ದರೆ ಆ ಕಾರ್ಡ್​ಗಳನ್ನು ವಾಪಸ್​ ಹಿಂತಿರುಗಿಸಲಿ.
| ಕಿರಣ್​ಕುಮಾರ್​ ಆಹಾರ ಶಿರಸ್ಥೇದಾರ್​

ನಮ್ಮ ಮನೆಯಲ್ಲಿ ಮೂರು ಜನರಿದ್ದು, ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದೇವೆ. ನಾವು ಕುರಿಗಾಹಿಯಾಗಿದ್ದು, ಇದರಿಂದಲೇ ಜೀವನ ನಡೆಯುತ್ತಿದ್ದೇವೆ. ಆದರೆ ಪಡಿತರ ಚೀಟಿ ರದ್ದುಪಡಿಸಿದ್ದ ಕಾರಣ ಮಾತ್ರ ತಿಳಿದಿಲ್ಲ. ಬಡವರ ಪಡಿತರಚೀಟಿಗಳನ್ನು ರದ್ದುಪಡಿಸಿರುವುದು ಸರಿಯಲ್ಲ. ಪರಿಶೀಲಿಸಿ ನಮಗೆ ಪಡಿತರ ನೀಡಬೇಕು.
|  ಹೊಸಪಾಳ್ಯದ ಲಕ್ಷ್ಮಯ್ಯ

ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ನಮಗೆ ಆಹಾರ ಇಲಾಖೆಯಿಂದ ಬಿಪಿಎಲ್​ ಪಡಿತರ ಚೀಟಿ ನೀಡಿದ್ದರು. ಆದರೆ ಈಗ ಅದನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಕೇಳಿದಾಗ ನಾವು ಆದಾಯ ತೆರಿಗೆ ಪಾವತಿದಾರರು ಎಂದು ತೋರಿಸುತ್ತಿದೆ. ಕರೊನಾ ಅವಧಿಯಲ್ಲಿ ನಮ್ಮ ಖಾತೆಯಲ್ಲಿ ಹಣ ವರ್ಗಾವಣೆಯಾಗಿದ್ದ ಕಾರಣ ನೀಡಿ ಕಾರ್ಡ್​ ರದ್ದುಪಡಿಸಿದ್ದಾರೆ. ಆದರೆ ನಾವು ಈ ಪಡಿತರಚೀಟಿಯನ್ನೇ ನಂಬಿ ಬದುಕುತ್ತಿದ್ದೇವೆ. ನಮ್ಮ ಪಡಿತರಚೀಟಿ ಚಾಲ್ತಿ ಮಾಡಿ ಕೊಡಬೇಕು.
|  ಬಸವರಾಜು ಲಾನುಭವಿ ಶೆಟ್ಟಿಕೆರೆ

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…