ನೆರೆಯಿಂದ 737 ಕೋಟಿ ರೂ. ಹಾನಿ

blank

ಕಾರವಾರ: ಕಳೆದ ವಾರ ಸಂಭವಿಸಿದ ಪ್ರವಾಹದಿಂದ ಜಿಲ್ಲೆಯಲ್ಲಿ 737.54 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ. ನೆರೆಯಿಂದ ಆದ ಪರಿಣಾಮದ ಕುರಿತು ವಿವರಿಸಿದೆ.
387 ಕೋಟಿ ರೂಪಾಯಿ ರಸ್ತೆಗಳು, 149 ಕೋಟಿ ರೂಪಾಯಿ ಸೇತುವೆಗಳಿಂದ, 4.93 ಕೋಟಿ ರೂಪಾಯಿ ಸರ್ಕಾರಿ ಕಟ್ಟಡಗಳಿಗೆ, 5.54 ಕೋಟಿ ರೂಪಾಯಿ ಕುಡಿಯುವ ನೀರಿನ ಯೋಜನೆಗಳಿಗೆ, 89.92 ಕೋಟಿ ರೂಪಾಯಿ ಸಣ್ಣ ನೀರಾವರಿ ಇಲಾಖೆಗೆ, 4.49 ಕೋಟಿ ರೂಪಾಯಿ, ಹೆದ್ದಾರಿ ಇಲಾಖೆಗೆ 95 ಕೋಟಿ ರೂಪಾಯಿ, ಹೆಸ್ಕಾಂಗೆ 4.49 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ಹೊರತುಪಡಿಸಿ 8984 ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿದೆ. 1472 ಮನೆಗಳು ಬಿದ್ದಿ ಹೋಗಿವೆ. 1123 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 562 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪರಿಹಾರ ನಿಧಿ ಖಾತೆಯಲ್ಲಿ 47.17 ಕೋಟಿ ರೂಪಾಯಿ ಲಭ್ಯವಿದೆ. ಅದರಿಂದ ಪರಿಹಾರ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಮಾಹಿತಿ ನೀಡಿದ್ದಾರೆ.
ಶೀಘ್ರ ಸಂಚಾರ ಆರಂಭ: ಅಂಕೋಲಾ-ಯಲ್ಲಾಪುರ ಅರಬೈಲ್ ಘಟ್ಟ ರಸ್ತೆಯಲ್ಲಿ ಶೀಘ್ರ ಎಲ್ಲ ವಾಹನ ಓಡಾಟಕ್ಕೆ ಕ್ರಮ ವಹಿಸಲಾಗುವುದು. ಕಾರವಾರ-ಜೊಯಿಡಾ ಅಣಶಿ ಘಟ್ಟ ರಸ್ತೆಯಲ್ಲಿ ಸಂಚಾರ ಇನ್ನಷ್ಟು ವಿಳಂಬವಾಗಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Share This Article

ಮಕ್ಕಳು ಪ್ರತಿದಿನ ತಿನ್ನಲೇ ಬೇಕಾದ ಹಣ್ಣುಗಳಿವು..ಕಾರಣ ಹೀಗಿದೆ | Fruits

Fruits: ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಹಣ್ಣುಗಳು ಬಹಳ ಪ್ರಯೋಜನಕಾರಿ. ಹಣ್ಣುಗಳಲ್ಲಿ…

ನೀವು ಕೂಡ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈರುಳ್ಳಿ ತಿನ್ನಲೇಬೇಡಿ.. onion

onion : ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.…

ನೀವು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತೀರಾ? ಹುಷಾರಾಗಿರಿ.. heels

heels : ಮಹಿಳೆಯರು ತಮ್ಮ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಹೈ ಹೀಲ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು…