ನಕಲಿ ರಬ್ಬರ್​ ಸ್ಟಾಂಪ್​ ಬಳಸಿ ವಂಚನೆ ಆರೋಪಿ ಬಂಧನ

ಕುಣಿಗಲ್​: ಕೆನರಾ ಬ್ಯಾಂಕ್​ ನಕಲಿ ರಬ್ಬರ್​ ಸ್ಟಾಂಪ್​ ಬಳಸಿ ಕುಣಿಗಲ್​ ಪುರಸಭೆ ಆಸ್ತಿ ತೆರಿಗೆ ಪಾವತಿ ಮಾಡಲಾಗಿದೆ ಎಂದು ನಂಬಿಸಿ ಲಾಂತರ ರೂಪಾಯಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯವರ್ತಿ ಉಪ್ಪಾರ ಬೀದಿ ನಿವಾಸಿ ಕೃಷ್ಣ ಅಲಿಯಾಸ್​ ಕಿಟ್ಟಿ ಎಂಬಾತ ನೂರಾರು ಜನರ ತೆರಿಗೆ ವಾವತಿಸುವುದಾಗಿ ಆಸ್ತಿ ಮಾಲೀಕರಿಂದ ಹಣ ಪಡೆದು ನಕಲಿ ಸೀಲ್​ ಬಳಸಿದ ಚಲನ್​ ಕೊಟ್ಟು ವಂಚಿಸಿರುವುದುನ್ನು ತಡವಾಗಿ ತಿಳಿದುಕೊಂಡು ಪುರಸಭೆ ಮುಖ್ಯಾಧಿಕಾರಿ, ಕುಣಿಗಲ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪುರಸಭೆ ಕಚೇರಿ ಸಿಬ್ಬಂದಿ ಚಲನ್​ನಲ್ಲಿ ನಮೂದಾಗಿರುವ ಬ್ಯಾಂಕ್​ ಸೀಲ್​ ಅಸ್ಪಷ್ಟವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಗಮನಿಸಿ, ನಕಲಿ ಇರಬಹುದೆಂದು ಅನುಮಾನಗೊಂಡು ಪುರಸಭೆ ಮುಖ್ಯಾ-ಕಾರಿ ಜಿ. ಮಂಜುಳಾ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕೆನರಾ ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪುರಸಭೆಗೆ ಬಂದ ನಕಲಿ ಚಲನ್​ ಒಂದರಲ್ಲಿಯೇ 42,072 ರೂ. ವಂಚಿಸಲಾಗಿದ್ದು, ಇನ್ನೂ ನೂರಾರು ನಕಲಿ ಚಲನ್​ ಮೂಲಕ ಪುರಸಭೆಗೆ ಲಾಂತರ ರೂ. ವಂಚಿಸಲಾಗಿದೆ ಎನ್ನಲಾಗಿದೆ.
ಆಸ್ತಿ ಮಾಲೀಕ ನಾಗರಾಜು ಅವರನ್ನು ಕಚೇರಿಗೆ ಕರೆಸಿಕೊಂಡು ವಿಚಾರಿಸಿದಾದ ಅವರು ಪುರಸಭೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವ ಕೃಷ್ಣ ಎಂಬುವವನಿಗೆ ಹಣಕೊಟ್ಟು ಬ್ಯಾಂಕ್​ನಲ್ಲಿ ಪಾವತಿಸಲು ತಿಳಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆರೋಪಿ ಕೃಷ್ಣನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

blank
Share This Article
blank

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

blank