ದಾಸೋಹ ಪರಿಕಲ್ಪನೆ ನೀಡಿದ ಶರಣರು

blank

ಹುಲಸೂರು: ಹನ್ನೆರಡನೆಯ ಶತಮಾನದ ಶರಣರು ಕಾಯಕ ಜತೆ ದಾಸೋಹ ಪರಿಕಲ್ಪನೆಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ನಾಗಾಬಾಯಿ ಬುಳ್ಳಾ ಹೇಳಿದರು.

blank

ಬೇಲೂರಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನ, ಶರಣ ಉರಿಲಿಂಗಪೆದ್ದಿ ಉತ್ಸವ ಹಾಗೂ ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪಾಲಕರು ಭೇದಭಾವ ಮಾಡದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.

ಶರಣರು ಜಾತಿ, ಮತ, ಪಂಥ ಎನ್ನದೆ ನಾವೆಲ್ಲರೂ ಒಂದು ಎಂಬ ಸಂದೇಶವನ್ನು ವಿಶ್ವಕ್ಕೆ ಹೇಳಿಕೊಟ್ಟಿದ್ದಾರೆ. ಹೆಚ್ಚು ಪಾಪ ಮಾಡಿದವರು ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡುತ್ತಾರೆ ಎಂಬದು ನನ್ನ ಭಾವನೆ. ದೇವರು ಗುಡಿಯಲ್ಲಿಲ್ಲದೆ ಮನಸ್ಸಿನಲ್ಲಿದ್ದಾನೆ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಡಾ.ರಮೇಶ ಲಂಡನಕರ್ ಮಾತನಾಡಿ, ಅಸ್ಪ್ಯಶ್ಯತೆ, ಮೂಢನಂಬಿಕೆ ಬಿಟ್ಟು ಮಠಾಧೀಶರ ನೇತೃತ್ವದಲ್ಲಿ ಚಳವಳಿ ರೂಪಿಸಬೇಕಾಗಿದೆ. ವೈಚಾರಿಕ ಚಿಂತನೆ ಮನೆಯಿಂದಲೇ ಆರಂಭವಾಗಲಿ ಎಂದು ಆಶಿಸಿದರು.

ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಸರ್ವೋದಯ ಸಮ್ಮೇಳನಕ್ಷನದ ಕುಂಭವಾಗಿದೆ. ಶರಣರ ವಿಚಾರ ಹೇಳಿ ಮೌಢ್ಯ ಮಾಡುವುದು ಹಾಸ್ಯಾಸ್ಪದ. ಬೇಲೂರಿನಲ್ಲಿ ಸರ್ಕಾರ ಶರಣ ಉರಿಲಿಂಗಪೆದ್ದಿ ಸ್ಮಾರಕ ಸ್ಥಾಪಿಸಲಿ ಎಂದು ಒತ್ತಾಸೆ ವ್ಯಕ್ತಪಡಿಸಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವೈಶಿಷ್ಟ್ಯಪೂರ್ಣ ಸಮ್ಮೇಳನ ಆಯೋಜಿಸಿ ಸರ್ವೋದಯ ತತ್ವ ಬುದ್ಧ, ಬಸವಣ್ಣ, ಶರಣರು ಬೋಧಿಸಿದ್ದು ಮಹತ್ವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ವಾಧ್ಯಕ್ಷರಾದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಧನರಾಜ ತಾಳಂಪಳ್ಳಿ, ಅರ್ಜುನ ಕನಕ, ಮಲ್ಲಿನಾಥ ಹಿರೇಮಠ, ಪಂಚಾಕ್ಷರಿ ಹಿರೇಮಠ, ಅಪ್ಪಣ್ಣ ಜನವಾಡ, ಸುರೇಶ ಕಾನೇಕರ್, ಗೀತಾರಾಣಿ ಐನೊಳಿ, ಸಂಜಯ ಜಾಧವ್, ಸೈಯದ್ ಖಾಜಿ, ನಾಗೇಶ ಸಿಂಗೆ, ಶಶಿಕಾಂತ, ಡಾ.ಸಿದ್ಧಪ್ಪ ಹೊಸಮನಿ, ಶರಣಬಸಪ್ಪ ಬಿರಾದಾರ ಇತರರಿದ್ದರು.

ಜಗನ್ನಾಥ ಚಿಲ್ಲಾಬಟ್ಟೆ ಸ್ವಾಗತಿಸಿದರು. ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಜಕುಮಾರ ಮಾಳಗೆ, ಸಂಜುಕುಮಾರ ನಡುಕರ ನಿರೂಪಣೆ ಮಾಡಿದರು. ಗಣಪತಿ ರಾಧು ವಂದಿಸಿದರು.

ಧರಿಸಿರಿ, ಕರುನಾಡು ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರದ ಸಾಧಕರಾದ ಶಿವಕುಮಾರ ಕೆರೂರಕರ್, ವಿಜಯಕುಮಾರ ಕಾಂಬಳೆ, ಡಾ.ವಿಜಯಕುಮಾರ ಗೋಪಾಲೆ, ಭೀಮಾಶಂಕರ ಸಂಗೋಳಿ, ಅಂಬೇಡ್ಕರ್ ತಳಕೇರಿ, ಶೇಖಪ್ಪ ಪವಾರ್, ಡಾ.ಬಸಪ್ಪ ಮಹಾಂತಪ್ಪ ದುಗಾಣಿ ಅವರಿಗೆ ಧರಿಸಿರಿ ಹಾಗೂ ಚಂದ್ರಶೇಖರ ನಾಗಾವಿ, ರಮೇಶ ಮಾರನ್, ಚನ್ನವೀರ ಕಣ್ಣಗಿ, ಎಸ್.ಬಿ. ಕುಚಬಾಳ, ಡಾ.ಮಹಾಂತೇಶ ರಡೇರಹಟ್ಡಿ, ಶಿವಪ್ಪ ಹೊಸಮನಿ, ದೇವೇಂದ್ರಪ್ಪ ಅರಳಿ ಕಟ್ಟೆ ಅವರಿಗೆ ಕರುನಾಡು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಬುರಗಿಯ ಸುಜಾತ ಟಿ.ಜಿ. ಅವರನ್ನು ಸನ್ಮಾನಿಸಲಾಯಿತು.

ಸರ್ವಾಧ್ಯಕ್ಷರ ಅದ್ದೂರಿ ಮೆರವಣಿಗೆ: ಬೇಲೂರಿನಲ್ಲಿ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಅದ್ದೂರಿ ಮೆರವಣಿಗೆ ನಡೆಯಿತು. ಅಲಂಕೃತ ಸಾರೋಟಿನಲ್ಲಿ ಶ್ರೀಗಳು ಆಸೀನರಾಗಿದ್ದರೆ, ಚಿರು ತೋರಣಗಳಿಂದ ಸಿಂಗರಿಸಿದ್ದ ಪ್ರತ್ಯೇಕ ವಾಹನದಲ್ಲಿ ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ ಹಾಗೂ ಇನ್ನೊಂದರಲ್ಲಿ ಶರಣ-ಶರಣೆಯರ ಭಾವಚಿತ್ರಗಳು ಗಮನಸೆಳೆದವು. ಸೇಡಂನ ಹಲಗೆ ವಾದನ, ಕುಸನೂರದ ಡೊಳ್ಳು ಕುಣಿತ, ಕಲಬುರಗಿಯ ಸನಾಯಿ, ಚಟ್ಟಲಗಿ ವಾದನ, ಬೇಮಳಖೇಡದ ಕಾಳವ್ವೆ ಭಜನಾ ತಂಡ, ಹಾರಕೂಡದ ಭಜನಾ ತಂಡ, ಸಮತಾ ಸೈನಿಕ ದಳ, ಬೇಲೂರು ಕೋಲಾಟ ತಂಡ, ಸಸ್ತಾಪುರ, ಬಸವಕಲ್ಯಾಣ, ಬೇಲೂರ ಸಮತಾ ಮಹಿಳಾ ಭಜನೆ ತಂಡದ ಕಲಾವಿದರು ತಮ್ಮ ತಮ್ಮ ಕಲಾಕೌಶಲ ಪ್ರದರ್ಶಿಸಿದರು. ಸಮುದಾಯ ಭವನ ಬಳಿ ಮಹಿಳಾ ಬೀದಿಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಮೋರೆ ಚಾಲನೆ ನೀಡಿದ ಮೆರವಣಿಗೆ ವಿವಿಧ ಬಡಾವಣೆಗಳ ಮೂಲಕ ವೇದಿಕೆಗೆ ಆಗಮಿಸಿತು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಮಹಾಲಿಂಗ ದೇವರು, ಶರಣಬಸಪ್ಪ ಬಿರಾದಾರ, ಗೀತಾರಾಣಿ ಐನೋಳೆ, ಸಂಜಯ ಜಾಧವ, ಶಶಿಕಾಂತ ಭೋಸ್ಲೆ, ಸೈಯದ್ ಖಾಜಾ, ನಾಗೇಶ ಶಿಂಧೆ, ರಾಜಕುಮಾರ ಹಿರಲೆ, ಗಣಪತಿ ಮುಡಬಿಕರ್, ಭಾಗ್ಯವಾನ್, ಕಾಶೀನಾಥ ಭೆಂಡೆ, ಡಿ.ಆರ್. ಸೋನಾರೆ, ಡಾ.ಗವಿಸಿದ್ದಪ್ಪ ಪಾಟೀಲ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾನೇಕರ್, ಶ್ರೀಧರ ಹೊಸಮನಿ ಇತರರಿದ್ದರು.

Share This Article

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…