ಗೊಳಸಂಗಿ: ಕರುನಾಡಿನ ಪ್ರಪ್ರಥಮ ವಚನಕಾರ ದೇವರ ದಾಸಿಮಯ್ಯ ನೇಕಾರರ ಬದುಕಿನ ಆಶಾಕಿರಣವಾಗಿದ್ದಾರೆ. ಅವರು ದೇವಮಾನವ ಆಗಿದ್ದರು ಎಂದು ಸ್ಥಳೀಯ ಗ್ರಂಥಪಾಲಕಿ ಶಿಲ್ಪಾ ಗುಳೇದಗುಡ್ಡ ಹೇಳಿದರು.

ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ 1044 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಸಿಮಯ್ಯನ ಬದುಕು ಬಡತನದಿಂದ ಇದ್ದರೂ ಮಾನವೀಯ ಮೌಲ್ಯಗಳನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದರು ಎಂದರು.
ಗ್ರಾಪಂ ಸಹಾಯಕ ಅಧಿಕಾರಿ ರವಿ ಭುಜಂಗೋಳ, ಹಿರಿಯ ಸಿಬ್ಬಂದಿ ಚನ್ನಮಲ್ಲ ಗುಡ್ಡದ, ರಸೂಲ ಡೋಲಚಿ, ಪತ್ತೇಸಾಬ ಖುರೇಷಿ, ಮಂಜುನಾಥ ಮಸಬಿನಾಳ ಇತರರಿದ್ದರು.