ಚಿತ್ರದುರ್ಗ:ಮುರುಘಾಮಠ ಜಮುರಾ ಕಲಾಲೋಕದ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಅವರು ಬೆಂಗಳೂರು ಬಸವ ಸಮಿತಿಯ 2025ನೇ ಸಾಲಿನ ವರ್ಷದ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದ್ದಾರೆ. ಒಂದು ಲಕ್ಷ ರೂ.ನಗದು ಮತ್ತು ಫಲಕವನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು ಬಸವ ಸಮಿತಿಯಲ್ಲಿ ಏ.30 ಏರ್ಪಡಿಸಿರುವ ವಿಶ್ವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ.
ತೋಟಪ್ಪ ಕಳೆದ 35 ವರ್ಷಗಳಿಂದ ವಚನ ಗಾಯನ,ರೂಪಕ ಮತ್ತು ನಾಟಕಗಳ ಮೂಲಕ ನಾಡಿನೆಲ್ಲೆಡೆ ಬಸವ ಪ್ರಜ್ಞೆಯನ್ನು ಪ್ರಚರು ಪಡಿಸುತ್ತಾ ಬಂದಿದ್ದಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪುಟ್ಟರಾಜ ಗವಾಯಿ ಅವರ ಶಿಷ್ಯರಾಗಿ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಸಂಗೀತ ನಿರ್ದೇಶಕರಾಗಿ,ಬಸವಾದಿ ಶರಣರು ರಚಿಸಿದ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರಾಜ್ಯಹಾಗೂ ಹೊರ ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ವಚನ ಸಂಗಿತೋ ತ್ಸವ,ಹಂಪಿ ಉತ್ಸವ,ದುರ್ಗೋತ್ಸವ,ಹಾವೇರಿ ಜಿಲ್ಲಾ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ತೋಟಪ್ಪ ಉತ್ತಂಗಿ ಅವರಿಗೆ ವರ್ಷದ ಸಾಧಕ ಪ್ರಶಸ್ತಿ

ಜಸ್ಟ್ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin
Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…
ಸಾಧನೆ ಸಂಭ್ರಮಿಸೋಣ ಸೇವೆಗೆ ಅಣಿಯಾಗೋಣ
ಮೊನ್ನೆಯಷ್ಟೇ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಬಂದಿತು. ಈ ಫಲಿತಾಂಶ ತಂದ ಸಂತಸ ಮತ್ತು ಸಂದೇಶ…
ಅನಾನಸ್ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips
Health Tips : ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಆಕರ್ಷಕ ಹಳದಿ ಹಣ್ಣಾದ ಅನಾನಸ್,…