ಮಡಿಕೇರಿ : ಇತಿಹಾಸ ಪ್ರಸಿದ್ಧ ಕುಶಾಲನಗರದ ಶ್ರೀ ಗಣಪತಿ ರಥೋತ್ಸವವನ್ನು ಡಿಸೆಂಬರ್ 1ರಂದು ನಡೆಸಲು ತೀರ್ಮಾನಿಸಲಾಗಿದೆ.
ಕುಶಾಲನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಶನಿವಾರ ನಡೆದ ಗಣಪತಿ ದೇವಾಲಯ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕ ವಿ.ಪಿ.ಶಶಿಧರ್, ವಿ.ಡಿ.ಪುಂಡರೀಕಾಕ್ಷ, ಎಂ.ವಿ.ನಾರಾಯಣ, ಎಂ.ಕೆ.ದಿನೇಶ್, ಜಿ.ಎಲ್.ನಾಗರಾಜ್, ಟಿ.ಆರ್.ಶರವಣಕುಮಾರ್, ಎಸ್.ಕೆ.ಶ್ರೀನಿವಾಸ್ ಇತರರು ಇದ್ದರು.