ಜಕಣಾಚಾರಿ ಶಿಲಾಮೂರ್ತಿ ಪ್ರತಿಷ್ಠಾಪಿಸಿ

blank

ರಟ್ಟಿಹಳ್ಳಿ: ಅಮರಶಿಲ್ಪಿ ಜಕಣಾಚಾರಿ ಶಿಲಾಮೂರ್ತಿಯನ್ನು ಸರ್ಕಾರವು ಬೇಲೂರಿನ ಚೆನ್ನಕೇಶವ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಬೇಕು ಎಂದು ವಿಶ್ವಕರ್ಮ ಯುವ ಘಟಕದ ಕಾರ್ಯದರ್ಶಿ ವೀರಬಸಪ್ಪ ಅರ್ಕಚಾರಿ ಒತ್ತಾಯಿಸಿದರು.

ಪಟ್ಟಣದ ಕಾಳಿಕಾಂಬ ದೇವಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆಯಲ್ಲಿ ಅವರು ಮಾತನಾಡಿದರು. ದೇಶದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಜಕಣಾಚಾರಿ ಅವರ ಶಿಲ್ಪಕಲೆ ಕಾಣಬಹುದಾಗಿದೆ. ದೇಶದ ಸಂಸ್ಕೃತಿಯನ್ನು ಶಿಲ್ಪಕಲೆಯ ಮೂಲಕ ಅಜರಾಮರವಾಗಿ ಉಳಿಯುವಂತೆ ಮಾಡಿದ್ದಾರೆ. ಹೀಗಾಗಿ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಜಕಣಾಚಾರಿ ಅವರ ಹೆಸರಿಡಬೇಕು. ರಟ್ಟಿಹಳ್ಳಿ ಪಟ್ಟಣದ ಪ್ರಮುಖ ವೃತ್ತಕ್ಕೆ ಅಮರ ಶಿಲ್ಪಿ ಜಕಣಾಚಾರಿ ಎಂದು ನಾಮಕರಣ ಮಾಡಬೇಕು. ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ನೀಡುವ ಸೌಲಭ್ಯಗಳು ಸಕಾಲಕ್ಕೆ ದೊರೆಯುವಂತಾಗಬೇಕು ಎಂದರು.

ವಿರೂಪಾಕ್ಷಾಚಾರ ಅವರು ಪೂಜಾ ಕೈಂಕರ್ಯ ನೆರವೇರಿಸಿದರು. ಸಮಾಜದ ಮುಖಂಡರಾದ ವೀರಪ್ಪ ಮಾಯಾಚಾರಿ, ಬ್ರಹ್ಮಚಾರಿ ಅರ್ಕಚಾರಿ, ವೀರೇಶ ಅರ್ಕಚಾರಿ, ಕುಮರ ಮಾಯಾಚಾರಿ, ಕುಶಾ ಮಾಯಾಚಾರಿ, ಪತಿಯಪ್ಪ ಮಾಯಾಚಾರಿ, ರಾಘವೇಂದ್ರ ಅರ್ಕಚಾರಿ, ಮಾಲತೇಶಚಾರ ಶಿಲ್ಪಿ, ಮಹೇಶ ನೇಶ್ವಿ, ಮಹೇಂದ್ರ ಶಿರಗಂಬಿ, ಸುನಿಲ ಮಾಯಾಚಾರಿ, ರವಿ ಮಾಯಾಚಾರಿ, ಲವಾ ಮಾಯಾಚಾರಿ, ಸಂತೋಷ ಅರ್ಕಚಾರಿ, ರಮೇಶ ಮಾಯಾಚಾರಿ, ಮಹಿಳಾ ಘಟಕದ ಸುಧಾ ಅರ್ಕಚಾರಿ, ಲತಾ ಅರ್ಕಚಾರಿ, ಪುಷ್ಪ ಮಾಯಾಚಾರಿ, ಕವಿತಾ ಅರ್ಕಚಾರಿ, ರೇಣುಕಾ ಮಾಯಾಚಾರಿ ಇತರರು ಇದ್ದರು.

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…