ಚಾಮರಾಜನಗರದಲ್ಲಿ ತಲ್ವಾರ್ ಸದ್ದು

ಚಾಮರಾಜನಗರ: ತರಕಾರಿ ವ್ಯಾಪಾರಿಯೊಬ್ಬನ ಮೇಲೆ ಏಕಾಏಕಿ ತಲ್ವಾರ್ ಬೀಸಿ ಕೊಲೆ ಪ್ರಯತ್ನ ಮಾಡಿರುವ ಸಂಬಂಧ ಗುರುವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮೇಗಲಪುರ ಬೀದಿಯ ನಿವಾಸಿ ಕೃಷ್ಣಮೂರ್ತಿ ದೊಡ್ಡಂಗಡಿ ಬೀದಿಯ ಪುಟ್ ಪಾತ್ ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಸಮೀಪದಲ್ಲೇ ಗಿರೀಶ್ ಎಂಬುವವರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಬುಧವಾರ ರಾತ್ರಿಯ ವೇಳೆಯಲ್ಲಿ ಗಿರೀಶ್ ಪರಿಚಯಸ್ಥನಾದ ದೀಪು ಎಂಬುವವನು ದ್ವಿಚಕ್ರ ವಾಹನದಲ್ಲಿ ವ್ಯಾಪಾರ ಮಾಡುವ ಸ್ಥಳಕ್ಕೆ ಬಂದು ಹಣದ ವಿಚಾರವಾಗಿ ಗಿರೀಶನೊಂದಿಗೆ ಕೂಗಾಟ ನಡೆಸುತ್ತಿದ್ದನು. ಈ ವೇಳೆ ದೀಪು ಅವರನ್ನು ಪ್ರಶ್ನಿಸಲು ಹೋದಾಗ ಕೃಷ್ಣಮೂರ್ತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ದೀಪು ಅವರನ್ನು ಗಿರೀಶನೇ ಸಮಾಧಾನ ಮಾಡಿ ಕಳುಹಿಸಿದ್ದನು.

ಸ್ವಲ್ಪ ಸಮಯದ ಬಳಿಕ ಅದೇ ಸ್ಥಳಕ್ಕೆ ಬಂದ ದೀಪು ಎಂಬುವವರು ಕೃಷ್ಣಮೂರ್ತಿ ಮೇಲೆ ತಲ್ವಾರ್ ನಿಂದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದರೂ ಕೃಷ್ಣಮೂರ್ತಿ ಅವರ ಎರಡು ಬೆರಳಿಗೆ ತೀವ್ರವಾದ ಪೆಟ್ಟಾಗಿದೆ. ಅಷ್ಟಕ್ಕೆ ಸಮೀಪದಲ್ಲೇ ಇದ್ದ ವ್ಯಾಪಾರಿಯೊಬ್ಬರು ಗಲಾಟೆಯನ್ನು ತಪ್ಪಿಸಿದ್ದಾರೆ. ಈ ಸಂಬಂಧ ಕೃಷ್ಣಮೂರ್ತಿ ಅವರು ದೀಪು ಅವರ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…