ಸಿನಿಮಾ

ಚಾಂಪಿಯನ್ ಪಟ್ಟ ಅಲಂಕರಿಸಿದ ಹಾಲುಗುಂದ ತಂಡ

ಮಡಿಕೇರಿ: ಕೊಡಗು ಹೆಗ್ಗಡ ಸಮಾಜದ ವತಿಯಿಂದ ಮೂರ್ನಾಡುವಿನ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಸೀನಿಯರ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಹಾಲುಗುಂದ ತಂಡ ಪಾರಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.


ಮೊದಲು ಬ್ಯಾಟ್ ಮಾಡಿದ ಹಾಲುಗುಂದ ತಂಡ ಶ್ರೇಯಸ್ ಅರ್ಧ ಶತಕ ಮತ್ತು ಅವಿನಾಶ್ 35 ರನ್‌ಗಳ ನೆರವಿನಿಂದ ನಿಗದಿತ 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 ರನ್‌ಗಳ ಗುರಿಯನ್ನು ನೀಡಿತು. ಪಾರಣೆ ತಂಡದ ಅಕ್ಷತ್ 5 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಪಾರಣೆ ತಂಡ 53 ರನ್ನು ಗಳಿಸುವಷ್ಟೇ ಶಕ್ತರಾಗಿ ಸೋಲು ಒಪ್ಪಿಕೊಂಡಿತು.


ಉತ್ತಮ ಬ್ಯಾಟ್ಸ್‌ಮನ್, ಪಂದ್ಯ ಪುರುಷೋತ್ತಮ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶ್ರೇಯಸ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಪಾರಣೆ ತಂಡದ ಅಕ್ಷತ್ ಪಡೆದುಕೊಂಡರು. ಜೂನಿಯರ್ ವಿಭಾದಲ್ಲಿ ಪೊನ್ನಂಪೇಟೆ ತಂಡವು ಬೆಟ್ಟಗೇರಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದಕೊಂಡಿತು. ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆವಿನ್ ಕುಟ್ಟಪ್ಪ ಪಡೆದುಕೊಂಡರು.


ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಬಿಟ್ಟಂಗಾಲ ತಂಡವು ಪಾರಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಾಧ್ಯವಾಯಿತು.


ಪ್ರಥಮ ಬಾರಿಗೆ ನಡೆದ ಹಗ್ಗಜಗ್ಗಾಟದಲ್ಲಿ ಹಾತೂರು ತಂಡ ಒಂಟಿಯಂಗಡಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಪಾರಣೆ ತಂಡವು ಹಾತ್ತೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗಿಟ್ಟಿಸಿತು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ವಹಿಸಿದ್ದರು.


ಪಡಿಞರಂಡ ಅಯ್ಯಪ್ಪ ಮಾತನಾಡಿ, ಅವರು ಕ್ರೀಡಾಕೂಟದ ಯಶಸ್ಸು ಕೊಡಗು ಜಿಲ್ಲೆಯ ಜನತೆಯ ಕ್ರೀಡಾಪ್ರೇಮ ಮತ್ತು ಕ್ರೀಡಾ ಆಸಕ್ತಿಗೆ ಮತ್ತಷ್ಟು ಮೆರುಗು ನೀಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಳ್ಳಡ ಪೂಣಚ್ಚ, ಸುತಾ ಪೂಣಚ್ಚ, ಕ್ರೀಡಾ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ. ನಿರ್ದೇಶಕರಾದ ತೊರೇರ ಮುದ್ದಯ್ಯ, ಪದಿಕಂಡ ಸುನಾ, ಚಮರ್ಂಡ ಅಪ್ಪುಣು ಪೂವಯ್ಯ, ಮುರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ, ಕೊಂಗೆಪಂಡ ರವಿ, ಮೂರೀರ ಶಾಂತಿ, ತಂಬಂಡ ಮಂಜುನಾಥ್, ಚಳಿಂಡ ಕಮಲಾ, ಪುದಿಯತಂಡ ಜಾಲಿ, ಪ್ರಮುಖರಾದ ತೊರೇರ ರಾಜ, ಬೊಳ್ಳಡಿಚಂಡ ರಂಜಿ, ಬೈರಿಕುಂದಿರ ಪ್ರವೀಣ್, ಪಡಿಞರಂಡ ಗಿರೀಶ್, ಕಾಕೇರ ರವಿ, ಪದಿಕಂಡ ಕುಶ, ಪಡಿಞರಂಡ ಕವಿತಾ, ತೊರೇರ ಉಮೇಶ್, ಕೊಂಗೆಪಂಡ ಕುಟ್ಟಪ್ಪ, ಪದಿಕಂಡ ಈಶ್ವರ ಮತ್ತಿತರರು ಹಾಜರಿದ್ದರು.

Latest Posts

ಲೈಫ್‌ಸ್ಟೈಲ್