ಗ್ರಾಮೀಣ ಕ್ಷೇತ್ರದ ಜನ ಈ ಸಲ ಮರುಳಾಗಲ್ಲ

blank

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಜನರು ಮುಗ್ಧರು, ಸ್ವಾಭಿಮಾನಿಗಳು ಅವರಿಗೆ ಕುಕ್ಕರ್, ಮಿಕ್ಸರ್ ನೀಡಿ ಅವಮಾನಿಸುವ ಕೆಲಸವನ್ನು ಸ್ಥಳೀಯ ಶಾಸಕರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಗ್ರಾಮೀಣ ಕ್ಷೇತ್ರದ ಉಚಗಾಂವಿಯಲ್ಲಿ ಮಂಗಳವಾರ ಅಭಿಮಾನಿಗಳು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದು ಚುನಾಯಿತಗೊಂಡಿರುವ ಶಾಸಕಿ ಇದೀಗ ಅಭಿವೃದ್ಧಿ ಬದಲಾಗಿ ಕುಕ್ಕರ್, ಮಿಕ್ಸರ್ ಹಂಚುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಹಣ ಹಂಚಿ ಇಡಿ ಮತಕ್ಷೇತ್ರ ನನ್ನ ಮನೆಯಲ್ಲಿರುತ್ತದೆ ಎಂದು ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರಿಗೆ ಕ್ಷೇತ್ರದ ಜನರು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ನಾಯಕರೊಬ್ಬರು ಕನಕಪುರದಲ್ಲಿ ಡುಪ್ಲಿಕೇಟ್ ಕುಕ್ಕರ್, ಮಿಕ್ಸರ್ ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ಓರಿಜಿನಲ್ ಕುಕ್ಕರ್ 1,400 ರಿಂದ 1,500 ರೂ.ವರೆಗೆ ಇರುತ್ತದೆ. ಇಲ್ಲಿ ಹಂಚಿಕೆ ಮಾಡಿರುವುದು 200 ರೂ. ಬೆಲೆಬಾಳುವ ಕುಕ್ಕರ್. ಬಡ ಜನರು ಆಸೆಗೆ ಬಿದ್ದು ತೆಗೆದುಕೊಂಡರೆ ಪ್ರಾಣಕ್ಕೆ ಅಪಾಯವಾಗಬಹುದು. ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಹಂಚಿದ ಕುಕ್ಕರ್‌ನಿಂದ ಸಾಕಷ್ಟು ಜನರಿಗೆ ಹಾನಿಯಾಗಿದೆ ಎಂದು ದೂರಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭವ್ಯವಾದ ಕಾರ್ಯಕ್ರಮ ನೋಡಿ ಜಿಲ್ಲೆ ಸೇರಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ರೋಮಾಂಚಿತರಾಗಿದ್ದಾರೆ.

ಎಲ್ಲ ಕೇಸರಿಮಯವಾಗಿದ್ದು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ವಿತ. ಗ್ರಾಮೀಣ ಕ್ಷೇತ್ರದ ಮೂರು ಭಾಗದಲ್ಲಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ವಿರೋಧಿಗಳು ಎಷ್ಟೇ ಹಣ ಹಂಚಿದರೂ ಅವರ ನಾಟಕಕ್ಕೆ ಜನರು ಮರಳಾಗುವುದಿಲ್ಲ. ಒಂದು ಬಾರಿ ಜನರು ಮೋಸ ಹೋಗಬಹುದು. ಪದೇ ಪದೆ ಮೋಸ ಹೋಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಖಂಡರಾದ ನಾಗೇಶ ಮನ್ನೋಳ್ಕರ್, ಕಿರಣ ಜಾಧವ ಇತರರಿದ್ದರು.

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…