ಗ್ರಾಪಂ ಸಮಗ್ರ ಅಭಿವೃದ್ಧಿಗೆ ಕರ ವಸೂಲಿ ಅತ್ಯಗತ್ಯ

blank

ಚಿತ್ರದುರ್ಗ: ವ್ಯವಸ್ಥಿತ ಯೋಜನೆ ಮೂಲಕ ಶೇ.100ರಷ್ಟು ಕರ ವಸೂಲಿಯಲ್ಲಿ ಸಾಧನೆ ಮಾಡಬಹುದಾಗಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಶೇ.100 ಕರ ವಸೂಲಾತಿ ಮಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕರ ವಸೂಲಿಗಾರರನ್ನು ಸನ್ಮಾನಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕರ ವಸೂಲಿ ಆಗಬೇಕಿದೆ. ಕರ ವಸೂಲಿ ಅಂದೋಲನ, ಜಾಗೃತಿ, ಸಮನ್ವಯತೆ, ತಂತ್ರಜ್ಞಾನ ಬಳಕೆಯೊಂದಿಗೆ ಶೇ. 100 ಕರ ವಸೂಲಿ ಮಾಡಿರುವುದು ಉತ್ತಮ ಬೆಳೆವಣಿಗೆ. ತೆರಿಗೆ ಆದಾಯವನ್ನು ನೌಕರರ ಸಂಬಳ, ಗ್ರಾಮದ ಅಭಿವೃದ್ಧಿ ಮತ್ತು ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಬಳಸಬೇಕಿದೆ. ಗ್ರಾಪಂಗಳ ಸಮಗ್ರ ಅಭಿವೃದ್ಧಿಗೆ ಕರ ವಸೂಲಿ ಅಗತ್ಯ ಎಂದು ಪ್ರತಿಪಾದಿಸಿದರು.
ಚಿತ್ರದುರ್ಗ ತಾಪಂ ಇಒ ವೈ.ರವಿಕುಮಾರ್ ಮಾತನಾಡಿ,ಸಿಇಒ,ಮುಖ್ಯಯೋಜನಾಧಿಕಾರಿಗಳ ನಿತ್ಯದ ಮಾರ್ಗದರ್ಶನದಂತೆ ಅಭಿಯಾನ ನಡೆಸಿ,ಕರ ವಸೂಲಾತಿಯಲ್ಲಿ ಉತ್ತಮ ಸಾಧನೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ.100 ಕರವಸೂಲಿಗೆ ಈಗಾಗಲೇ ಯೋಜನೆ ರೂಪಿಸಿ,ಕಾರ‌್ಯ ಗತಗೊಳಿಸಲಾಗುತ್ತಿದೆ ಎಂದರು.
ಚಿತ್ರದುರ್ಗ ತಾಪಂ ನರೇಗಾ ಸಹಾಯಕ ನಿರ್ದೇಶಕ ಎಚ್.ಯರ‌್ರಿಸ್ವಾಮಿ ಮಾತನಾಡಿ,5 ಗ್ರಾಪಂಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇ ಮಕ, ಪಿಡಿಒ,ಬಿಲ್‌ಕಲೆಕ್ಟರ್ ಮನೆ,ಮನೆ ಭೇಟಿಯಿಂದ ಕರ ವಸೂಲಾತಿಯಲ್ಲಿ ಸಾಧನೆ ಆಗಿದೆ ಎಂದರು. 2024-25ನೇ ಸಾಲಿನಲ್ಲಿ ಕರ ವ ಸೂಲಿಯಲ್ಲಿ ಜಿಲ್ಲೆಯಲ್ಲಿ ಶೇ.77.58 ಸಾಧನೆ ಮಾಡಿರುವ ರವಿಕುಮಾರ್ ಹಾಗೂ ಯರ‌್ರಿಸ್ವಾಮಿ ಅವರನ್ನು ಗೌರವಿಸಲಾಯಿತು.
ಜಿಪಂ ಉಪ ಕಾರ‌್ಯದರ್ಶಿ ಕೆ.ತಿಮ್ಮಪ್ಪ, ಸಿಪಿಒ ಗಾಯತ್ರಿ,ಸಿಎಒ ಮಧು,ಜಿಲ್ಲಾ ಯೋಜನಾ ವ್ಯವಸ್ಥಾಪಕ(ಇ-ಆಡಳಿತ)ಎಚ್.ಶಶಿಧರ್,ಸಹಾಯ ಕ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸೈಯದ್ ಪಿಜಾ ಏ ಇರಮ್,ನರೇಗಾ ಶಾಖೆ ವ್ಯವಸ್ಥಾಪಕ ಸುನೀಲ್,ಜಿಲ್ಲಾ ನರೇಗಾ ಎಡಿಪಿಸಿ ಮೋಹನ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್ ಇತರರು ಇದ್ದರು.

blank

ಸನ್ಮಾನಿತ ಗ್ರಾಪಂಗಳ ಪಿಡಿಒ,ಬಿಲ್‌ಕಲೆಕ್ಟರ್ ಹೆಸರು

ಗ್ರಾಪಂ-ಪಿಡಿಒ-ಬಿಲ್‌ಕಲೆಕ್ಟರ್
ಇಂಗಳದಾಳ-ವಿದ್ಯಾಶ್ರೀ-ಎಚ್.ನಾಗರಾಜ್
ಮಾಡನಾಯಕನಹಳ್ಳಿ-ಟಿ.ಲಲಿತಾ-ಎಸ್.ಎನ್.ಮಲ್ಲಿಕಾ
ಮಲ್ಲಾಡಿಹಳ್ಳಿ-ಇ.ಚೂಡಾಮಣಿ -ಎಂ.ನವೀನ್ ಕುಮಾರ್
ಗುಂಡೇರಿ-ಎಸ್.ಉಷಾ-ಜಿ.ಕೆ.ಶಿವಕುಮಾರ್
ಮತ್ತೊಡು-ಜಿ.ಶೇಖರಪ್ಪ-ಎಸ್.ಈಶ್ವರಪ್ಪ
ಲಕ್ಕಿಹಳ್ಳಿ-ಎನ್.ಹನುಮಂತಪ್ಪ-ಕುಮಾರ್
ಕಂಗುವಳ್ಳಿ-ಎಸ್.ಗೋವಿಂದರಾಜು-ಟಿ.ಧನಂಜಯ
ಬೋಕಿಕೆರೆ-ಬಿ.ಆರ್.ಜಯಣ್ಣ-ಟಿ.ಮಂಜುನಾಥ್
ದೊಡ್ಡ ಉಳ್ಳಾರ್ತಿ-ಸುರೇಶ್-ಬಿ.ಜಯರಾಮ್
ಅಬ್ಬೇನಹಳ್ಳಿ-ಎಂ.ಮೋಹನ್‌ದಾಸ್-ಶೇಖರಪ್ಪ
—–

Share This Article

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…