ಕಾನಹೊಸಹಳ್ಳಿ: ಪೂಜಾರಹಳ್ಳಿ ಗ್ರಾಮದ ಕಲ್ಲಹಳ್ಳಿ ರಸ್ತೆ ಬದಿ 2022-23ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿದ್ದ ಮೆಟ್ಲಿಂಗ್ ಕಾಮಗಾರಿಯನ್ನು ನ್ಯಾ.ನಾಗಮೋಹನ ದಾಸ್ ವಿಚಾರಣಾ ಆಯೋಗದ ತಾಂತ್ರಿಕ ತಜ್ಞ ಪ್ರದೀಪ್ ಸರದೇಶಪಾಂಡೆ ಬುಧವಾರ ಪರಿಶೀಲಿಸಿದರು.


ಬಳಿಕ ಬೆಳ್ಳಗಟ್ಟೆ ಗ್ರಾಪಂ ವ್ಯಾಪ್ತಿಯ ಯರ್ರಲಿಂಗನಹಳ್ಳಿಯಲ್ಲಿ 2019-20ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿದ್ದ ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಕಾಮಗಾರಿ ಉತ್ತಮವಾಗಿ ಮಾಡಲಾಗಿದೆ. ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಂತ್ರಿಕ ತಜ್ಞ ಪ್ರದೀಪ್ ಸರದೇಶಪಾಂಡೆ ಸೂಚಿಸಿದರು.
ನರೇಗಾ ತಾಂತ್ರಿಕ ಸಂಯೋಜಕ ಬಿ.ಮಹೇಶ್, ಪಿಡಿಒಗಳಾದ ಪೂಜಾರಹಳ್ಳಿ ಎಚ್.ಸಿ.ನಾರಾಯಣಪ್ಪ, ಬೆಳ್ಳಗಟ್ಟ ಹನುಮಂತಪ್ಪ, ತಾಂತ್ರಿಕ ಸಹಾಯಕರಾದ ಬಾಳಪ್ಪ ಭೀಮಪ್ಪ ಸಜ್ಜನ್, ಪಿ.ಎಂ.ಬಸವೇಶ್ವರಸ್ವಾಮಿ, ಗ್ರಾಪಂ ಸಿಬ್ಬಂದಿ ಇದ್ದರು.