ಕಂಪ್ಲಿ: ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಮಂಗಳವಾರ ನಡೆಯಿತು.
ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಎಲಿಗಾರ ನಾಗರಾಜ ಮಾತನಾಡಿ, ಎಲ್ಲ ಅರ್ಹತೆ ಹೊಂದಿರುವ ಗಂಗಾಮತಸ್ಥರನ್ನು ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು. ಇದಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸಮುದಾಯದ ಪ್ರಮುಖ ಅಯ್ಯೋದಿ ವೆಂಕಟೇಶ ಮಾತನಾಡಿ, ಸಮಾಜ ಸುಧಾರಣೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ಮಾನವೀಯ ನೆಲೆಯುಳ್ಳ ಕಳಕಳಿಯ ವಚನಗಳನ್ನು ರಚಿಸುವಲ್ಲಿ ಅಂಬಿಗರ ಚೌಡಯ್ಯ ಮುಂಚೂಣಿಯಲ್ಲಿದ್ದಾರೆ. ಚೌಡಯ್ಯ ಅವರ ತತ್ವ, ಆದರ್ಶಗಳನ್ನು ಅರ್ಥೈಸಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಗ್ರೇಡ್-2ತಹಸೀಲ್ದಾರ್ ಎಂ.ಆರ್.ಷಣ್ಮುಖ, ಶಿರಸ್ತೇದಾರ್ ಎಸ್.ಡಿ.ರಮೇಶ, ನಿಜಶರಣ ಅಂಬಿಗರ ಚೌಡಯ್ಯ ಸಂಘದ ತಾಲೂಕು ಅಧ್ಯಕ್ಷ ಕರೇಕಲ್ ಪ್ರಕಾಶ, ಪ್ರಮುಖರಾದ ಬಿ.ಸಿದ್ದಪ್ಪ, ಕೆ.ಮನೋಹರ, ಬಿ.ಈರಪ್ಪ, ಬಿ.ವೀರಭದ್ರಪ್ಪ, ಕಟ್ಟೆ ಸಣ್ಣ ದುರುಗಪ್ಪ, ಎಸ್.ನಂದೆಪ್ಪ, ಎಸ್.ಸುರೇಶ್, ಬಿ.ರಮೇಶ, ಯು.ವೆಂಕಟೇಶ, ಶೆರೆಗಾರ ರಾಜ, ಯು.ವಿರುಪಣ್ಣ, ಶಿವಕುಮಾರ, ಬಸವರಾಜ, ಅಯ್ಯೋದಿ ರಮೇಶ, ಇಟಗಿ ಈರಣ್ಣ, ಕಂದಾಯ ಅಧಿಕಾರಿಗಳಿದ್ದರು.
ಇದಕ್ಕೂ ಮುನ್ನ ಕೋಟೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಜಯಂತ್ಯುತ್ಸವ ಆಚರಿಸಲಾಯಿತು. ಮಾರುತಿನಗರದಲ್ಲಿ ಅಂಬಿಗರ ಚೌಡಯ್ಯ ವೃತ್ತದ ನಾಮಫಲಕ ಅನಾವರಣಗೊಳಿಸಲಾಯಿತು. ಗಂಗಾಮತಸ್ಥರು ಬೈಕ್ ರ್ಯಾಲಿ ಮೂಲಕ ಸಾಗಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸಮಾವೇಶಗೊಂಡರು.