ಕ್ಷುಲಕ ಕಾರಣಕ್ಕೆ ಓರ್ವನ ಮೇಲೆ ನಾಲ್ವರ ಗುಂಪು ಹಲ್ಲೆ

ಕೊಳ್ಳೇಗಾಲ: ಮನೆಯ ಬಳಿ ಸೀಗರೇಟ್ ಸೇದಿ ಕೊಂಡು ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದ ಯುವ ಕನೊಬ್ಬನಿಗೆ ನಾಲ್ವರ ಗುಂಪೊಂದು ಹಲ್ಲೆಗೈದು ತೀವ್ರ ಗಾಯಗೊಳಿಸಿದೆ.

ಪಟ್ಟಣದ ನಟರಾಜು ಮಗ ನಿಶ್ಚಲ್‌ರಾಜ್ ಹಲ್ಲೆಗೆ ಒಳಗಾದ ಗಾಯಾಳು. ಟಿ.ಸಿ.ಹುಂಡಿ ತುಷಾರ್, ಆನಂದಜ್ಯೋತಿ ಕಾಲನಿಯ ಮಹೇಶ್‌, ಪಟ್ಟಣದ ವಿದ್ಯಾನಗರದ ಅರುಣ್, ದರ್ಶನ್ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.

ಮಹದೇಶ್ವರ ಕಾಲೇಜಿನ ಬಳಿ ಇರುವ ನಟರಾಜು ಮನೆಯ ಮುಂದೆ ಡಿ.9ರಂದು ತುಶಾರ್, ಮಹೇಶ್, ಅರುಣ್ ಸಿಗರೇಟ್ ಸೇದಿ ಕೊಂಡು ಜಗಳ ವಾಡು ತ್ತಿದ್ದರು. ಈ ವೇಳೆ ನಟರಾಜು ಅವರ ಪುತ್ರ ನಿಶ್ಚಲ್ ರಾಜ್ ಇಲ್ಲಿ ಸಿಗರೇಟ್ ಸೇದಬೇಡಿ ಎಂದು ಹೇಳಿದಕ್ಕೆ ಸಣ್ಣದಾಗಿ ಗಲಾಟೆ ಸಂಭವಿಸಿತ್ತು. ಡಿ.11 ರಂಸು ನಿಶ್ಚಲ್‌ರಾಜ್ ಮನೆ ಮುಂದೆ ನಿಂತಿದ್ದಾಗ ಏಕಾಏಕಿ ಆಗಮಿಸಿದ ತುಷಾರ್, ಮಹೇಶ್, ಅರುಣ್, ದರ್ಶನ್ ಅವರು ಜಗಳ ತೆಗೆದು ಕಬ್ಬಿಣದ ರಾಡು ಹಾಗೂ ಕಲ್ಲಿ ನಿಂದ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿರುವ ನಿಶ್ಚಲ್ ರಾಜ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಬ್ಬಿಣದ ರಾಡು ಹಾಗೂ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.

ಅಲ್ಲದೆ ಜಗಳದ ಸಂದರ್ಭ ನನ್ನ ಕತ್ತಿನಲ್ಲಿದ್ದ ಅರ್ಧ ಭಾಗ ಚಿನ್ನದ ಚೈನ್ ಕಾಣೆಯಾಗಿದೆ ಎಂದು ಪೊಲೀಸರಿಗೆ ನಿಶ್ಚಲ್‌ರಾಜ್ ಹೇಳಿಕೆಯಲ್ಲಿ ದೂರಿ ದ್ದಾರೆ. ಈ ಸಂಬಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಎಸೈ ಮಧುಕುಮಾ‌ರ್ ಪ್ರಕರಣ ದಾಖಲಿಸಿ ಕೊಂ ಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…