ಕೃತಿಗಳ ಲೋಕಾರ್ಪಣೆ
ಗುರು-ಶಿಷ್ಯರ ಸಂಬಂಧ ಸಂಸ್ಕೃತಿಯ ಪ್ರತೀಕ ಇತಿಹಾಸಕಾರ ಡಾ. ಬಿ. ರಾಜಶೇಖರಪ್ಪ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗುರು ಶಿಷ್ಯರ ಸಂಬಂಧವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿದೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಬ್ಬರ ಮೇಲೂ ಇರುತ್ತದೆ ಎಂದು ಚಿತ್ರದುರ್ಗದ ಖ್ಯಾತ ಸಂಶೋಧಕ ಹಾಗೂ ಇತಿಹಾಸಕಾರ ಡಾ. ಬಿ. ರಾಜಶೇಖರಪ್ಪ ಅವರು ಇಂದು ಅಭಿಪ್ರಾಯ ಪಟ್ಟರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಎ.ಎಂ. ಜಯಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರ ಮಾತನಾಡಿದರು.
ಎ.ಎಂ. ಜಯಶ್ರೀ ಅವರು ಜಿನದತ್ತ ದೇಸಾಯಿಯವರ ಜೀವನ ಚರಿತ್ರೆಯನ್ನು ಸುಂದರವಾಗಿ ಕಟ್ಟಿಕೊಟ್ಟು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ಜೀವನದ ಕಷ್ಟಗಳನ್ನು ಏರಿಳಿತಗಳನ್ನು ಮನೋಜ್ಞವಾಗಿ ಹಣ್ಣೆಲೆಯ ಹಸಿರು ನೆನವು ಕೃತಿ ಕಟ್ಟಿ ಕೊಡುತ್ತದೆ.
ಅವರ ಕೊಳಲಾಗುವ ಆಸೆ ಕವನ ಸಂಕಲವು ಅನೇಕ ಸುಂದರವಾದ ಕವಿತೆಗಳನ್ನು ಹೊಂದಿದ್ದು ಇದರಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿಬಂದಿದೆ ಎಂದು ವಿವರಿಸಿದರು.
ಲೇಖಕಿ ಎಂ ಎಂ ಜಯಶ್ರೀ, ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಇತರರಿದ್ದರು.