ಕುರುಗೋಡು: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಬಿರುಗಾಳಿ ಸಹಿತ ಮಳೆಯಾಯಿತು. ಕೋಳೂರು, ಮದಿರೆ, ಸೋಮಸಮುದ್ರ, ವದ್ದಟ್ಟಿ, ಬಾದನಹಟ್ಟಿ, ಯಲ್ಲಾಪುರ, ಶ್ರೀನಿವಾಸ್ ನಗರ, ಲಕ್ಷ್ಮೀಪುರ, ಕಲ್ಲುಕಂಬದಲ್ಲಿ ಮಳೆ ಸುರಿಯಿತು. ಇದರಿಂದಾಗಿ ವಾಹನ ಸವಾರರು, ಭತ್ತ ಕಟಾವು ಮಾಡಿರುವ ರೈತರು ಪರದಾಡುವಂತಾಯಿತು.

