ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಲಿ

blank

ಚಿಟಗುಪ್ಪ: ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಕರಕನಳ್ಳಿ ಗ್ರಾಮದಲ್ಲಿ ಶ್ರೀ ಗುರು ಗಂಗಾಧರ ಭಕ್ಕಪ್ರಭುಗಳ ೨೧೧ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿಯಿಡೀ ನಡೆದ ಸಂಗೀತ ದರ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಗುರು ಗಂಗಾಧರ ಬಕ್ಕಪ್ರಭು ಅವರು ಈ ಭಾಗದಲ್ಲಿ ಪವಾಡ ಪುರುಷರಾಗಿದ್ದರಿಂದ ಇಂದಿಗೂ ಸಹ ಅಪಾರ ಭಕ್ತ ಸಮೂಹ ಹೊಂದಿದ್ದಾರೆ. ತಪಸ್ವಿಗಳಾದ ಅವರು ಬೇಡಿದ ವರವ ನೀಡುವ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಎಂದರು.

ನೇತೃತ್ವ ವಹಿಸಿದ್ದ ಜಹೀರಾಬಾದ್‌ನ ಮಲ್ಲಯಗಿರಿಯ ಶ್ರೀ ಡಾ. ಬಸವಲಿಂಗ ಅವಧೂತರು ಮಾತನಾಡಿ, ಪ್ರಭುಗಳ ತತ್ವ ಆದರ್ಶಗಳೊಂದಿಗೆ ಭಕ್ತಿ ಪರಂಪರೆ ಮೈಗೂಡಿಸಿಕೊಂಡು ತಾನು ನನ್ನವರು ಎಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಮತ್ತು ಜೀವನ ಇರೋವರೆಗೂ ತಂದೆ ತಾಯಿಗಳ ಸೇವೆ ಮಾಡಿದಾಗ ನಿಜವಾದ ಭಗವಂತ ಅವರಲ್ಲಿ ನೆಲೆಸಿರುತ್ತಾನೆ ಎಂದರು.

ಸ್ವಂತದ ಶ್ರೀ ಶಿವಕುಮಾರ ಶಿವಾಚಾರ್ಯರು, ಚಾಂಗಲೇರಾದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಶ್ರೀ ಶಿವಯೋಗಿ ಶಿವಾಚಾರ್ಯರು, ಶ್ರೀ ಡಾ.ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಡಾ.ನೀತಾ ಬೆಲ್ದಾಳೆ, ಶಕುಂತಲಾ ಬೆಲ್ದಾಳೆ, ಗ್ರಾಪಂ ಅಧ್ಯಕ್ಷೆ ನೀಲಾವತಿ ಪಾಟೀಲ್, ಮೋಹನದಾಸ ಮಾಧವಶೆಟ್ಟಿ, ದೇವಿಂದ್ರಪ್ಪ ಚಾಂಗಲೇರಾ, ಲಕ್ಷ್ಮೀಕಾಂತರೆಡ್ಡಿ,ಗೋಪಾರೆಡ್ಡಿ ನಿರ್ಣಾ, ಅಶೋಕ ರಾಮಜಿ, ರಾಜಪ್ಪ ಮುತ್ಯಾ, ಲಕ್ಷ್ಮೀಕಾಂತ ಕುಲಕರ್ಣಿ, ಜಗನ್ನಾಥ ರೆಡ್ಡಿ ಮಟಾಟಿ, ನಾಗಪ್ಪ ಮಕಾಜಿ, ಪ್ರಭು ಘಾಟೊಳ್ಳಿ, ಜಗನ್ನಾಥ ಗಾರಿ ಇತರರಿದ್ದರು.

ಕಲಾವಿದರಾದ ಧುಳಪ್ಪ ಮುಡಬಿ, ಗೋಪಾಲ ಸಾವರಮಠ, ಶಿವಾನಿ, ರೇವಣಸಿದ್ದಯ್ಯ ಸ್ವಾಮಿ ಹಿರೇಮಠ, ನಾಗೇಂದ್ರ ರಾಣಾಪುರ ವಿನೀತಕುಮಾರ ರಾಣಾಪುರ, ಶಿವಕುಮಾರ ಪಂಚಾಳ, ತುಕಾರಾಮ ಚಿಮಕೋಡೆ, ಅಶ್ವಿನಿ ರಾಜಕುಮಾರ ಹಿರೇಮಠ, ಮಾನಸಾ ಶಿವಕುಮಾರ ಪಂಚಾಳ, ನವಲಿಂಗ ಪಾಟೀಲ್, ದಯಾನಂದ ಹಿರೇಮಠ, ಜನಾರ್ಧನ ವಾಘಮಾರೆ ಮತ್ತಿತರರು ಸಂಗೀತ ದರ್ಬಾರ್‌ನಲ್ಲಿ ಸಂಗೀತ ಸೇವೆ ಸಲ್ಲಿಸಿದರು.

blank
Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…