More

    ಕರ್ನಾಟಕ ಸೇರಲು ಮಹಾರಾಷ್ಟ್ರದ ಕಾಗಲ್​ ಕಾತರ

    ಬೆಳಗಾವಿ: ಕೊಲ್ಲಾಪೂರ ಜಿಲ್ಲೆಯ ಕಾಗಲ್​ ತಾಲೂಕಿನ ಹತ್ತು ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಠರಾವು ಪಾಸ್​ ಮಾಡಿರುವುದು ಮಹಾರಾಷ್ಟ್ರ ಸರ್ಕಾರವನ್ನು ಕಂಗಾಲಾಗಿಸುವಂತೆ ಮಾಡಿದೆ.

    ಶೇ. 90 ಮರಾಠಿ ಭಾಷಿಕರೇ ಇರುವ ಗ್ರಾಮದ ಜನರು ಕೈ ಎತ್ತುವ ಮೂಲಕ ಈ ಇಂಗಿತ ವ್ಯಕ್ತಪಡಿಸಿರುವುದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ಕರ್ನಾಟಕದ 850 ಹಳ್ಳಿಗಳು ನಮಗೆ ಸೇರಬೇಕೆಂದು ಆಗಾಗ ತಗಾದೆ ತೆಗೆಯುತ್ತಿದ್ದ ಮಹಾರಾಷ್ಟ್ರಕ್ಕೆ ತನ್ನ ರಾಜ್ಯದ ಹಳ್ಳಿಗಳನ್ನೇ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

    ಕರ್ನಾಟಕದ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಮೆಚ್ಚಿ ಮರಾಠಿಗರು ಈ ರ್ನಿಣಯ ಮಾಡಿವೆ. ಮಳೆಗಾಲ ಇದ್ದರೂ ಕಾಗಲ್​ ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ. ಹೀಗಿದ್ದರೂ ದೂಧಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಪೂರೈಸುತ್ತಿರುವ ಮಹಾಸರ್ಕಾರದ ನೀತಿಗೆ ಕಾಗಲ್​ ತಾಲೂಕಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಹಾಸರ್ಕಾರದ ಯಾವುದೇ ಸೌಲಭ್ಯ, ಆಶ್ವಾಸನೆ ನಮಗೆ ಬೇಕಿಲ್ಲ. ಇತರ ಹಳ್ಳಿಗಳ ಜನರಿಗಾದರೂ ಸಕಲ ಸೌಲಭ್ಯ ಕೊಟ್ಟು ಚೆನ್ನಾಗಿ ನೋಡಿಕೊಳ್ಳಿ ಎಂದೂ ಬುದ್ಧಿ ಹೇಳಿದ್ದಾರೆ.

    2ನೇ ಬಾರಿ ಮುಖಭಂಗ:
    ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳು ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದವು. ಪರಿಣಾಮ ಗಡಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ 1900 ಕೋಟಿ ರೂ. ಅನುದಾನದ ಪ್ಯಾಕೇಜ್​ ಕೊಡುವುದಾಗಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಭರವಸೆ ನೀಡಿದ್ದರು. ಆದರೆ ಇನ್ನೂವರೆಗೂ ಬಿಡುಗಡೆಗೊಂಡಿಲ್ಲ. ಇದೀಗ ಕಾಗಲ್​ ತಾಲೂಕಿನ ಹತ್ತು ಗ್ರಾಮಗಳು ರಾಜ್ಯ ಸೇರಲು ಉತ್ಸುಕವಾಗಿರುವುದು ಶಿಂಧೆ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts