ಕಬಡ್ಡಿಯಲ್ಲಿ ಡಿಎಸ್‌ಎಸ್ ತಂಡ ಚಾಂಪಿಯನ್

blank

ತರೀಕೆರೆ: ಅಜ್ಜಂಪುರ ಶೆಟ್ರು ಸಿದ್ದಪ್ಪ ಪ್ರೌಢಶಾಲೆ ಮೈದಾನದಲ್ಲಿ ಕದಂಬ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪ್ರೋ ಲೀಗ್ ಪಂದ್ಯಾವಳಿಯಲ್ಲಿ ಅತ್ತತ್ತಿ ಮಧುಸೂದನ್ ಮಾಲೀಕತ್ವದ ಡಿಎಸ್‌ಎಸ್ ತಂಡ ಗೆದ್ದು ಪ್ರಥಮ ಸ್ಥಾನ ಪಡೆಯಿತು.

ಹೊನಲು ಬೆಳಕಿನ ಪ್ರೋ ಲೀಗ್ ಕಬಡ್ಡಿ ಪಂದ್ಯಾವಳಿಯಲ್ಲಿ ಎಸ್‌ಎಸ್, ಐರಾವತ, ಬಿಆರ್‌ಎಸ್ ಸೇರಿ ಒಟ್ಟು 8 ತಂಡಗಳು ಸ್ಪರ್ಧಿಸಿದ್ದವು.
ಉತ್ತಮ ನಿರ್ವಹಣೆ ಮೂಲಕ ೈನಲ್ ಪ್ರವೇಶಿಸಿದ ಯತೀಶ್ ಮಾಲೀಕತ್ವದ ಮನೋಜ್‌ಗೌಡ ಹಾಗೂ ಅತ್ತತ್ತಿ ಮಧುಸೂದನ್ ಮಾಲೀಕತ್ವದ ಡಿಎಸ್‌ಎಸ್ ತಂಡ ಅಂತಿಮ ಕಾದಾಟದಲ್ಲಿ ಅತ್ತತ್ತಿ ಮಧುಸೂದನ್ ಮಾಲೀಕತ್ವದ ಡಿಎಸ್‌ಎಸ್ ತಂಡಕ್ಕೆ ಜಯ ಒಲಿಯಿತು.
ಡಿಎಸ್‌ಎಸ್ ತಂಡದ ನಾಯಕ ಪ್ರಜ್ವಲ್ ಪ್ರಥಮ ಸ್ಥಾನದೊಂದಿಗೆ 50 ಸಾವಿರ ರೂ. ನಗದು ಮತ್ತು ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ಯತೀಶ್ ಮಾಲೀಕತ್ವದ ಮನೋಜ್‌ಗೌಡ ತಂಡದ ನಾಯಕ 30 ಸಾವಿರ ರೂ. ನಗದು, ಟ್ರೋಫಿ ಹಾಗೂ ಬಿ.ರಂಗಸ್ವಾಮಿ ಮಾಲೀಕತ್ವದ ತಂಡದ ನಾಯಕ ಚಿದಾನಂದ 15 ಸಾವಿರ ರೂ. ನಗದು ಬಹುಮಾನದ ಜತೆ ಆಕರ್ಷಕ ಟ್ರೋಫಿ ಪಡೆದುಕೊಂಡರು.
ಕದಂಬ ಸ್ಪೋಟ್ಸ್ ಕ್ಲಬ್ ಗೌರವ ಅಧ್ಯಕ್ಷ ಎ.ಟಿ.ಶ್ರೀನಿವಾಸ್, ಅಧ್ಯಕ್ಷ ನವೀನ್ ಮಂದಾಲಿ, ಪ್ರಮುಖರಾದ ಬೊಮ್ಮರಾಜ್, ಅಣ್ಣಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವೀರೇಂದ್ರ ಅವರು ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…