ಚಿಕ್ಕಮಗಳೂರು: ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಮಹಿಳಾ ಸಂಕುಲಕ್ಕೆ ಆದರ್ಶಪ್ರಾಯ ಎಂದು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾ ಮಲ್ಲೇಶ್ ತಿಳಿಸಿದರು.

ನಗರದ ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ರತ್ನಗಿರಿ ರಸ್ತೆ ಮತ್ತು ರಾಮನಹಳ್ಳಿಯ ಶರಣೆ ಮುಕ್ತಾಯಕ್ಕ ತಂಡದಿAದ ಆಯೋಜಿಸಲಾಗಿದ್ದ ಅಕ್ಕಮಹಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಉಡುತಡಿ ಗ್ರಾಮದಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ಎಂಬ ಶಿವಭಕ್ತರ ಮಗಳಾಗಿ ಮಹಾದೇವಿ ಜನಿಸಿದರು. ಬಾಲ್ಯದಲ್ಲೆ ಭಕ್ತಿಯ ಪರಾಕಾಷ್ಠೆಯಲ್ಲಿದ್ದ ಬಾಲಕಿ ಚನ್ನಮಲ್ಲಿಕಾರ್ಜುನನೆ ಸರ್ವಸ್ವ ಎಂದು ಭಾವಿಸಿದಾಕೆ. ಅಸಾಧಾರಣ ಸುಂದರಿಯಾದರೂ ಲೌಕಿಕ ವಿಚಾರಗಳ ಬಗ್ಗೆ ಆಸಕ್ತಿ ತಾಳದೆ ಆಧ್ಯಾತ್ಮದ ಬಗ್ಗೆ ಅಪಾರ ಒಲವು ತಾಳಿದವಳು ಎಂದರು.
ಸುಖ-ಭೋಗವನ್ನು ತೊರೆದು ಅನುಭವ ಮಂಟಪ ಸೇರಿ ಪುರುಷರಿಗೆ ಸಮನಾಗಿ ಭಕ್ತಿ ಸಾಧನೆ ಮಾಡಿ ಹೆಸರಾದವಳು. ಚನ್ನಮಲ್ಲಿಕಾರ್ಜುನ ನಾಮಾಂಕಿತದಲ್ಲಿ ೪೩೦ ವಚನಗಳನ್ನು ರಚಿಸಿ ಕನ್ನಡದ ಪ್ರಪ್ರಥಮ ಮಹಿಳಾ ಕವಯತ್ರಿ ಎನಿಸಿಕೊಂಡವಳು. ಅನುಭಾವದ ಮೂಸೆಯಲ್ಲಿ ಬಂದ ಅಕ್ಕನ ವಚನಗಳು ಇಂದಿಗೂ ಪ್ರಸ್ತುತ. ಸ್ತಿçà ಸಮಾನತೆ, ಕಂದಾಚಾರ, ಮೌಢ್ಯತೆ ವಿರುದ್ಧ ಧ್ವನಿಯೆತ್ತಿದಾಕೆ ಎಂದು ಹೇಳಿದರು.
ಬೆಂಗಳೂರಿನ ಸ್ತಿçÃರೋಗ ತಜ್ಞೆ ಡಾ. ದೀಪ್ತಿ ಚೇತನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಹೆಣ್ಣುಮಕ್ಕಳೆ ಹೆಚ್ಚು ಬಲಶಾಲಿಗಳು ಎಂಬುದು ಸಾಬೀತಾಗಿದೆ. ಹೆಣ್ಣು ಭ್ರೂಣಗಳು ಅಧಿಕ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿರುತ್ತವೆ. ಋತುಚಕ್ರ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸ್ತಿçಯರಿಗೆ ಅನೇಕ ತೊಂದರೆಗಳು ಸಹಜ ಎಂದರು.
ಗರ್ಭಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ನಿಂದ ಮಹಿಳೆ ಬಳಲುವುದು ಅಧಿಕ. ಸಾಮಾನ್ಯವಾಗಿ ೪೫ವರ್ಷಗಳ ನಂತರ ವಿವಿಧ ತೊಂದರೆಗಳು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ನಿಯಂತ್ರಿಸುವ ಲಸಿಕೆಯನ್ನು ಇತ್ತೀಚಿನ ವರ್ಷಗಳಲ್ಲಿ ಕಂಡುಹಿಡಿಯಲಾಗಿದೆ. ಸಕಾಲದಲ್ಲಿ ಎರಡು ವ್ಯಾಕ್ಸಿನ್ಗಳನ್ನು ಹಾಕಿಸಿಕೊಳ್ಳುವ ಮೂಲಕ ಕ್ಯಾನ್ಸರ್ ಕಾಯಿಲೆಯಿಂದ ದೂರ ಉಳಿಯಬಹುದು. ಮಾನಸಿಕ ಹಾಗೂ ದೈಹಿಕ ಆರೋಗ್ಯಪಾಲನೆ ಕಡೆಗೆ ಸ್ತಿçÃಯರು ಹೆಚ್ಚಿನ ಗಮನ ತೋರಬೇಕು ಎಂದು ಕರೆ ನೀಡಿದರು.
ಅಕ್ಕಮಹಾದೇವಿ ಹೆಸರಿನಲ್ಲಿ ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸುಧಾರಣೆ ಕುರಿತಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಸ್ತುö್ತತ್ಯಾರ್ಹ ಎಂದರು.
ಮುಕ್ತಾಯಕ್ಕ ತಂಡದ ಮುಖಂಡೆ ಈಶ್ವರಿ ಹುಲಿಯಪ್ಪ ಅಕ್ಕನವಚನಗಳನ್ನು ಪ್ರಸ್ತುತಪಡಿಸಿದರು. ನಿರ್ದೇಶಕಿ ಭಾಗ್ಯಮಹೇಶ್, ಮಂಗಳಾ ಸದಾಶಿವ, ರಮ್ಯ ಸತೀಶ್, ಪಾರ್ವತಮ್ಮ, ರಾಜೇಶÀ್ವರಿ, ಪ್ರತಿಮಾ, ಲೀಲಾ, ಶೈಲಾ, ಆಶಾ ಹೇಮಂತ್, ಖಜಾಂಚಿ ಪಾರ್ವತಿ ಬಸವರಾಜು, ಸುಧಾ ರಾಜಶೇಖರ್, ಮಧು ಶಿವಕುಮಾರ್ ಮತ್ತಿತರರಿದ್ದರು.