ಎಸ್.ಎ.ಗಣೇಶ್ ಸ್ಥಾಯಿ ಸಮಿತಿ ಅಧ್ಯಕ್ಷ

blank
blank

ಚನ್ನರಾಯಪಟ್ಟಣ: ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ನಂ.22ರ ಜೆಡಿಎಸ್ ಸದಸ್ಯ ಎಸ್.ಎ.ಗಣೇಶ್ ಆಯ್ಕೆಯಾದರು.

ಅಧ್ಯಕ್ಷ ಸಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ನಿಗದಿಯಾಗಿತ್ತು. ಪರ್ಹನರೀಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಸ್.ಎ.ಗಣೇಶ್ ಹೊರತುಪಡಿಸಿ ಬೇರ‌್ಯಾರೂ ಆಕಾಂಕ್ಷಿಗಳಿಲ್ಲದ ಕಾರಣ ಅಧ್ಯಕ್ಷರು ಗಣೇಶ್ ಆಯ್ಕೆಯನ್ನು ಅನುಮೋದಿಸಿದರು. ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಶಾಸಕ ಸಿ.ಎನ್. ಬಾಲಕೃಷ್ಣ, ಉಪಾಧ್ಯಕ್ಷೆ ರಾಣಿಕೃಷ್ಣ, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ಜೆಡಿಎಸ್, ಕಾಂಗ್ರೆಸ್ ಸದಸ್ಯರು ಅಭಿನಂದಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸದಸ್ಯ ಗಣೇಶ್ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಲಹೆ ಮೇರೆಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿ ಎಂದರು.

ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ ಶಾಸಕರಾದ ಬಾಲಕೃಷ್ಣ ಅವರಿಗೆ, ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

Share This Article

ನಿಮ್ಮ ಮನೆ ಕಸದ ಬುಟ್ಟಿಯಿಂದ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ… garbage

garbage: ಅಡುಗೆಮನೆಯ ಆಹಾರ ತ್ಯಾಜ್ಯ ಮತ್ತು ಕಸದ ತೊಟ್ಟಿಗೆ ಎಸೆಯಲಾದ ಇತರ ಕಸವು ಬೇಗನೆ ಕೊಳೆಯುತ್ತದೆ…

ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಏಕೆ ಒಟ್ಟಿಗೆ ಇರಬಾರದು? ಇಲ್ಲಿದೆ ನೋಡಿ ಅಚ್ಚರಿಯ ಕಾರಣ… Ashadha

Ashadha : ತಿಂಗಳುಗಳಲ್ಲಿ ಆಷಾಢ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಆಷಾಢ ಮಾಸದಲ್ಲಿ ಅನೇಕ…