ಕಲಬುರಗಿ: ಎಂಇಎಸ್ ಕರಾಳ ದಿನಾಚರಣೆಗೆ ಆಗಮಿಸುತ್ತಿರುವ ಮಹಾರಾಷ್ಟç ಪ್ರತಿನಿಧಿಗಳಿಗೆ ಬೆಳಗಾವಿ ಗಡಿ ಪ್ರದೇಶಿಸದಂತೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಕಚೇರಿ ಪ್ರತಿನಿಧಿಗೆ ಮನವಿಪತ್ರ ಸಲ್ಲಿಸಿದರು. ರವಿ ದೇಗಾಂವ್, ಸಂದೀಪ ಭರಣಿ, ಸಂತೋಷ ಪಾಟೀಲ್, ಅಶ್ವತ್ಥ ಟಿ., ಮೌನೇಶ ಜಿನಕೇರಿ, ಸುನೀಲ್ ಪಾಟೀಲ್, ಈಶ್ವರ ಅಂಬಲಗಿ ಇತರರಿದ್ದರು.