ಚಿಕ್ಕಮಗಳೂರು: ಆಪರೇಷನ್ ಸಿಂಧೂರ ಬೆಂಬಲಿಸಿ, ದೇಶದ ಸರ್ವಾಂಗೀಣ ಗೆಲುವು ಮತ್ತು ಸೈನಿಕರ ಶೌರ್ಯ-ಪರಾಕ್ರಮಕ್ಕೆ ಜಯ ಸಿಗಲಿ ಎಂದು ಪ್ರಾಥಿಸಿ ಬಿಜೆಪಿಯಿಂದ ಬುಧವಾರ ನಗರದ ಶಂಕಮಠದಲ್ಲಿ ಶ್ರೀಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಂಕರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಗೆ ಜೈಕಾರ ಹಾಕಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಭಯೋತ್ಪಾದಕರ ವಿರುದ್ದ ಸರ್ಕಾರ ಹಾಗೂ ಸೇನೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಜಯಸಿಗಲಿ. ಎಲ್ಲ ವಿಧದಲ್ಲೂ ದೇಶಕ್ಕೆ ಒಳಿತಾಗಲಿ. ಎಂದು ಶ್ರೀಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿz್ದೆÃವೆ ಎಂದರು.
ಭಾರತಾAಬೆಯ ಸಿಂಧೂರ ಅಳಿಸಬೇಕು ಎಂಬ ಉz್ದÉÃಶದಿಂದ ಭಯೋತ್ಪಾದನೆ ಮೂಲಕ ಷಡ್ಯಂತ್ರ ನಡೆಸುತ್ತಿರುವ ಪಾಪಿಗಳಿಗೆ ಶಿಕ್ಷೆಯಾಗಲಿ. ಸೈನ್ಯ ಮತ್ತು ರೈತರನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ಸೈನಿಕರು ತಮ್ಮ ಜೀವಕೊಟ್ಟು ದೇಶ ಕಾಪಾಡುತ್ತಾರೆ. ಇಂಥ ಸೈನಿಕರ ಒಳಿತಿಗಾಗಿ ನಾವು ಪ್ರಾರ್ಥನೆ ಸಲ್ಲಿಸುವ ಉz್ದÉÃಶದಿಂದ ಪೂಜೆ ಸಲ್ಲಿಸಿz್ದÉÃವೆ. ಈ ಮೂಲಕ ಸೈನಿಕರ ಪರವಾಗಿ, ಸರ್ಕಾರದ ಪರವಾಗಿ ನಾವಿz್ದÉÃವೆ ಎಂಬ ಸಂದೇಶ ನೀಡಿz್ದÉÃವೆ ಎಂದು ಹೇಳಿದರು.
ತಾಯಿ ಶಾರದಾಂಬೆ ಎಲ್ಲ ರೀತಿಯಲ್ಲೂ ನಮ್ಮ ಸೈನಿಕರಿಗೆ ಶಕ್ತಿ ಕೊಡಲಿ. ಈ ಮೂಲಕ ನವ ರಾಕ್ಷಸರಿಗೆ ಕಠಿಣ ಶಿಕ್ಷೆ ಕೊಡಿಸು ಎಂದು ದೇವರಲ್ಲಿ ಪ್ರಾರ್ಥಿಸಿz್ದÉÃವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್.ಪುಷ್ಪರಾಜ್, ಡಾ.ನರೇಂದ್ರ, ಸೀತಾರಾಮ ಭರಣ್ಯ, ಸಚಿನ್ ಗೌಡ ಮತ್ತಿತರರಿದ್ದರು.