ಚಿಕ್ಕಮಗಳೂರು: ಅಮ್ಮ ಎನ್ನುವ ಪದಕ್ಕೆ ವಿಶಾಲವಾದ ಅರ್ಥವಿದೆ. ಹೀಗಾಗಿ ಅಮ್ಮನ ಹೆಸರಿನಲ್ಲಿಯೇ ಫೌಂಡೇಶನ್ ಆರಂಭಿಸಿ ಸಮಾಜ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಜೆಡಿಎಸ್ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ದಿವಾಕರ ಭಟ್ ತಿಳಿಸಿದರು.

ಕೊಪ್ಪ ತಾಲೂಕಿನ ಕೊಡೂರು ಗ್ರಾಮದ ಶಾಲಾ ಆವರಣದಲ್ಲಿ ಅಮ್ಮ ಫೌಂಡೇಶನ್ ನಿಂದ ಆಯೋಜಿಸಲಾಗಿದ್ದ ೧೮ನೇ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಧಾಕರ ಶೆಟ್ಟಿ ಅವರು ಶೃಂಗೇರಿ ಭಾಗಕ್ಕೆ ವರವಾಗಿದ್ದಾರೆ. ಸಮಾಜ ಸೇವೆ ಉz್ದೆÃಶದಿಂದಲೇ ಹಲವು ಸೇವಾ ಕಾರ್ಯ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್. ಪುರ ಭಾಗದಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿ ಹೆಚ್ಚಾಗಿತ್ತು. ಇದನ್ನು ಮನಗಂಡ ಸುಧಾಕರ ಶೆಟ್ಟಿ ಅವರು ೨೦೨೨ ರಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಿ ೫೦೦ ಜನರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಿದರು. ಇದಲ್ಲದೆ ತಾವೇ ಸ್ವತಃ ಕೋಪದಲ್ಲಿ ಸಂಜೀವ ಶೆಟ್ಟಿ ಅವರ ಹೆಸರಿನಲ್ಲಿ ಗಾರ್ಮೆಂಟ್ಸ್ ಆರಂಭಿಸುತ್ತಿದ್ದಾರೆ. ಇದರಿಂದಾಗಿ ಇನ್ನೂ ಎರಡು ಮೂರು ತಿಂಗಳ ಒಳಗಾಗಿ ಒಂದು ಸಾವಿರ ಮಂದಿ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಜೊತೆಗೆ ಶೃಂಗೇರಿ ಹಾಗೂ ಎನ್.ಆರ್.ಪುರ, ಬಾಳೆಹೊನ್ನೂರಿನಲ್ಲಿಯೂ ಮುಂದಿನ ದಿನಗಳಲ್ಲಿ ಗಾರ್ಮೆಂಟ್ಸ್ ಆರಂಭಿಸುವ ಚಿಂತನೆ ಹೊಂದಿದ್ದು ಆಗ ಕನಿಷ್ಠ ನಾಲ್ಕು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ಶೃAಗೇರಿ ಕ್ಷೇತ್ರ ವ್ಯಾಪ್ತಿಯ ಮೂರು ತಾಲೂಕುಗಳಲ್ಲಿ ಹಿಂದೆ ಹಲವು ಶಾಲೆಗಳು ಮುಚ್ಚುವ ಹಂತ ತಲುಪಿದ್ದವು. ಆಗ ಅಮ್ಮ ಫೌಂಡೇಶನ್ ನಿಂದ ಇಂತಹ ಶಾಲೆಗಳನ್ನು ದತ್ತು ಪಡೆದು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅಮ್ಮ ಫೌಂಡೇಶನ್ ಮೂಲಕವೇ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ಶಾಲೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಮ್ಮ ಫೌಂಡೇಶನ್ ವ್ಯಾಪ್ತಿಗೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ೫೦ ರಿಂದ ೬೦ ಸಾವಿರ ಕುಟುಂಬಗಳನ್ನು ತರುವ ಉz್ದÉÃಶ ಹೊಂದಲಾಗಿದೆ. ಇದಕ್ಕಾಗಿಯೇ ಅಮ್ಮ ಫೌಂಡೇಶನ್ ನ ಸದಸ್ಯತ್ವ ಅಭಿಯಾನ ಆರಂಭಿಸಿz್ದÉÃವೆ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿನಯ್ ಕಣಿವೆ ಮಾತನಾಡಿ, ಇಂದು ಎಲ್ಲಾ ವಸ್ತುಗಳು ಕಲಬೆರಕೆಯಾಗಿವೆ. ಹೀಗಾಗಿಯೇ ಇಂದು ಸಣ್ಣ ವಯಸ್ಸಿನವರಲ್ಲಿಯೇ ಹೃದಯಘಾತ ಸೇರಿದಂತೆ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಪಶ್ಚಿಮಾತ್ಯ ಆಹಾರ ಸೇವನೆಯೂ ನಮ್ಮ ಆರೋಗ್ಯವನ್ನು ಹದಗೆಡಿಸುತ್ತಿದೆ. ಹೀಗಾಗಿಯೇ ಹಿಂದೆ ಮನುಷ್ಯನ ಕೆಲವೇ ಅಂಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕ್ಯಾನ್ಸರ್ ಇಂದು ಎಲ್ಲಾ ಅಂಗಗಳಲ್ಲಿಯೂ ಕಾಣಿಸಿಕೊಳ್ಳಲಾರಂಬಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಇಂಥ ಉಚಿತ ಆರೋಗ್ಯ ಶಿಬಿರಗಳು ಎಲ್ಲೆಡೆಯೂ ನಡೆದಾಗ ಜನರು ಹಲವು ರೋಗಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಆಗ ಮಾತ್ರ ತಮ್ಮ ಆರೋಗ್ಯದ ಬಗ್ಗೆ ಜನ ಮುಂಜಾಗ್ರತೆ ವಹಿಸುವ ಮೂಲಕ ರೋಗ ಬರದಂತೆ ಎಚ್ಚರ ವಹಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಅಮ್ಮ ಫೌಂಡೇಶನ್ನ ಸಂಸ್ಥಾಪಕ ಸದಸ್ಯರಾದ ಶಿವಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ಜೆಡಿಎಸ್ ಮುಖಂಡ ಶೋಬಿತ್, ವೈದ್ಯರಾದ ಡಾ. ಶ್ರೀನಾ, ಡಾ.ಗಣೇಶ್, ಎಸ್ ಡಿಎಂಸಿ ಅಧ್ಯಕ್ಷ ವೆಂಕಟೇಶ್, ಶಾಲೆ ಮುಖ್ಯ ಶಿಕ್ಷಕ ಓಂಕಾರಪ್ಪ ಮತ್ತಿತರರಿದ್ದರು.