More

    ಅಭಿವೃದ್ಧಿಗೆ ಸಹಕಾರ ಅಗತ್ಯ

    ನಂದಗುಡಿ: ಚುನಾಯಿತ ಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಪಕ್ಷ ಭೇದ ಮರೆತು ಗ್ರಾಮಾಭಿವೃದ್ಧಿಪಡಿಸಿದಾಗ ಮಾತ್ರ ಅಧಿಕಾರ ಸಾರ್ಥಕವಾಗುತ್ತದೆ ಎಂದು ಜಿಪಂ ಸದಸ್ಯ ಸಿ. ನಾಗರಾಜ್ ಹೇಳಿದರು.

    ನಂದಗುಡಿ ಊರ ಬಾಗಿಲ ಬಳಿ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಸುಮಾರು ವರ್ಷಗಳಿಂದ ಕಲ್ಯಾಣಿಯಲ್ಲಿ ಗಿಡ ಗಂಟಿ ಬೆಳೆದಿದ್ದು ಕಲ್ಯಾಣಿ ಅಭಿವೃದ್ಧಿ ಮಾಡಿಸಿಕೊಡಿ ಎಂದು ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದ್ದರಿಂದ ನರೇಗಾದಡಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

    ನಂದಗುಡಿಯ 1ನೇ ವಾರ್ಡ್‌ನಲ್ಲಿ ಬೀದಿ ದೀಪ ಅಳವಡಿಸುವಂತೆ ಸಾರ್ವಜನಿಕರು ನನ್ನ ಗಮನಕ್ಕೆ ಹಾಗೂ ಗ್ರಾಪಂಗೂ ಅರ್ಜಿ ಸಲ್ಲಿಸಿದ್ದರು. ಬೀದಿ ದೀಪ ರಿಪೇರಿ ಮಾಡಲು ಆರಂಭಿಸಿದಾಗ ಗ್ರಾಪಂ ಮಾಜಿ ಸದಸ್ಯ ಪಿ.ವೀರರಾಜು ಮತ್ತು ಇತರರು ರಿಪೇರಿಯ ಬಿಲ್ ಪಾವತಿಸಬಾರದೆಂದು ಗ್ರಾಪಂಗೆ ತಕಾರಾರು ಅರ್ಜಿ ಸಲ್ಲಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳು ಯಾರೇ ಮಾಡಿದರು ಸಹಕಾರ ನೀಡಬೇಕು. ಇಲ್ಲವಾದರೆ ಅವರೆ ನಿಂತು ಕೆಲಸ ಮಾಡಲಿ ಈ ರೀತಿ ತಕಾರಾರು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

    ಪೊತಲೂರು ವೀರಬ್ರಹ್ಮೇಂದ್ರ ಸ್ವಾಮಿ ಮಠ, ಶ್ರೀ ಸಾಯಿಬಾಬಾ ಮಂದಿರ ಹಾಗೂ ಬಸವೆಶ್ವರ ದೇವಾಲಯಗಳನ್ನು ಅಭಿವೃದ್ಧಿಗೊಳಿಸಲು ತಾಲೂಕಿನ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಲಕ್ಷಾಂತರ ರೂ. ಧನ ಸಹಾಯ ಮಾಡಿದ್ದಾರೆ. ಊರ ಬಾಗಿಲ ಬಳಿ ನೆಲೆಸಿರುವ ಸುಗ್ಗಲಮ್ಮ, ಓಂ ಶಕ್ತಿ ದೇವಾಲಯಗಳನ್ನು ನನ್ನ ಸ್ವಂತ ಹಣದಿಂದ ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಹೇಳಿದರು.
    ತಾಪಂ ಮಾಜಿ ಸದಸ್ಯೆ ಸುಮಿತ್ರಮ್ಮ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ ರಾಜಶೇಖರ್, ಸದಸ್ಯರಾದ ನಟರಾಜ್, ಸುಬ್ರಮಣಿ, ಮಂಜುನಾಥ್, ಮುಖಂಡರಾದ ಹೊನ್ನೇಶ್, ಮಂಜುನಾಥ್, ರಾಕೇಶ್, ಶ್ರೀನಿವಾಸ್, ಸಿದ್ದರಾಜ್ ರಮೇಶ್, ಎನ್.ಟಿ ಗಂಗಾಧರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts