ಅಂಬೇಡ್ಕರ ವಿಚಾರಧಾರೆಗಳ ಅನುಷ್ಠಾನ ಅಗತ್ಯ

blank

ಬಾಗಲಕೋಟೆ: ನನ್ನ ದೇಶ ಭಾರತ ಹೀಗೆ ಇರಬೇಕೆಂಬ ಕಲ್ಪನೆಯಲ್ಲಿ ತನ್ನ ಇಡೀ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟು, ಸಂವಿಧಾನ ರಚಿಸಿ ಜಾಗತಿಕ ಮನ್ನಣೆ ಪಡೆದವರು ಡಾ.ಬಿ.ಆರ್.ಅಂಬೇಡ್ಕರ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಭಾನುವಾರ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದಲ್ಲಿ ಸ್ಥಾನಮಾನ ನೀಡಿ ತಮ್ಮ ಕನಸು ಸಾಕಾರ ಮಾಡಿಕೊಂಡಿದ್ದೇವೆ. ಅದಕ್ಕೆ ನಮ್ಮೆಲ್ಲ ದೇಶವಾಸಿಗಳು ಅನುಭವಿಸುತ್ತಿದ್ದೇವೆ ಎಂದ ಅವರು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಡಾ.ಅಂಬೇಡ್ಕರ ಅವರ ವಿಚಾರಧಾರೆಗಳ ಅನುಷ್ಠಾನ ಅಗತ್ಯವಾಗಿದೆ ಎಂದರು.

ಅ0ಬೇಡ್ಕರ ವೈಚಾರಿಕ ಪ್ರಜ್ಞೆ ಎತ್ತರದಲ್ಲಿದೆ. ಅವರು ಅನುಭವಿಸಿದ ಬಡತನ, ಅವಮಾನ, ಕಷ್ಟದ ದಿನಗಳಲ್ಲೂ ಕೂಡ ವಿಶ್ವಕ್ಕೆ ಮಾದರಿಯಾಗುವಂತ ಸಂವಿಧಾನ ನೀಡಿದ್ದಾರೆ. ಅದುವೇ ನಮ್ಮೆಲ್ಲರ ಬಾಳಿನ ದಾರಿದೀಪವಾಗಿದೆ. ನಾವೆಲ್ಲ ಅಂಬೇಡ್ಕರ ಬಂಧುಗಳು, ಭೀಮ ಬಂಧುಗಳು ಎಂದು ಹೇಳಿಕೊಂಡರೆ ಸಾಲದು. ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಂಡು ಸತ್ಯಾಸತ್ಯತೆ ತಿಳಿದುಕೊಂಡಾಗ ಮಾತ್ರ ಅಂಬೇಡ್ಕರರಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.

ನಮ್ಮ ಸಮಾಜದಲ್ಲಿ ಜನಿಸಿದ ಅಂಬೇಡ್ಕರ ಒಬ್ಬ ಮಹಾನ ವ್ಯಕ್ತಿ ಆಗಿದ್ದಾರೆ. ಅವರಂತೆ ನಮ್ಮ ಮಕ್ಕಳು ಎತ್ತರಕ್ಕೆ ಬೆಳೆಯಬೇಕು. ಅಂಬೇಡ್ಕ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರು ಅಳವಡಿಸಿಕೊಂಡರೆ ಬದುಕು ಸುಲಭವಾಗುತ್ತದೆ. ಅಂಬೇಡ್ಕರ ಅವರು ಒಂದು ಶಕ್ತಿಯಾಗಿದ್ದಾರೆ. ಅವರನ್ನು ವ್ಯಕ್ತಿಯಾಗಿ ಗುರ್ತಿಸುವುದು ತಪ್ಪು ಎಂದು ತಿಳಿಸಿದರು.

ತೋವಿವಿ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ಡಾ.ಅಂಬೇಡ್ಕರರ ಜಯಂತಿ ಉತ್ಸವವನ್ನು ಏಪ್ರಿಲ್ ಒಂದು ತಿಂಗಳ ಪರ್ಯಂತರ ಆಚರಿಸುತ್ತಾಬಂದಿದ್ದೇವೆ. ಆದರೆ ಅವರ ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಂಡಿದ್ದೇವೆ. ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ ಆಕಸ್ಮಿಕವಾಗಿ ಯಾರೂ ಸಹಾಯ ಮಾಡಿದಾಗ ಕೊನೆ ವರೆಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಂಬೇಡ್ಕರ ಅವರು ಮಾಡಿದ ಈ ಮಹಾನ ಕಾರ್ಯ ಅವರ ಜನ್ಮೋತ್ಸವ ಆಚರಿಸುವ ಮೂಲಕ ಸ್ಮರಿಸಬೇಕು ಎಂದು ಹೇಳಿದರು.

ಎಲ್ಲರ ಬುದ್ದಿಮಟ್ಟವೂ ಒಂದೇ ಇರುತ್ತದೆ. ಆದರೆ ಅನುಸರಿಸುವ ಮಾರ್ಗ ಬೇರೆ-ಬೇರೆಯಾಗಿರುತ್ತದೆ. ಇದರಿಂದ ಬುದ್ದಿ ಇಲ್ಲದಿದ್ದರೆ ನೈತಿಕತೆ ನಾಶವಾಗುತ್ತದೆ. ನೈತಿಕತೆ ಇಲ್ಲದಿದ್ದರೆ ಕ್ರಿಯಾಶೀಲತೆ ನಾಶವಾಗುತ್ತದೆ. ಕ್ರಿಯಾಶೀಲತೆ ನಾಶವಾದಾಗ ಅಂದು ಆ ವ್ಯಕ್ತಿಯೇ ನಾಶವಾಗಿ ಹೋಗುತ್ತಾನೆ. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಂಬೇಡ್ಕರ ಅವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದರು.

ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಕೆ.ಶಿವರಾಮು ಮಾತನಾಡಿ, ಸಮಾಜದ ಸಂಘಟನೆಯಲ್ಲಿ ಎಲ್ಲರೂ ಕೈಜೋಡಿಸುವ ಮೂಲಕ ಪ್ರತಿಯೊಬ್ಬರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಅವರ ಬೆಳವಣಿಗೆಗೆ ಶ್ರಮಿಸೋಣ ಎಂದರು.

ಚಿತ್ರದುರ್ಗ ಛಲವಾದಿ ಗುರುಪೀಠದ ಜಗದ್ಗುರು ಬಸವನಾಗಿದೇವ ಶರಣರು ಸಾನ್ನಿಧ್ಯ ವಹಿಸಿದ್ದರು. ಬುದ್ದವಿಹಾರದ ಆಯುಷ್ಮಾನ ದಮ್ಮಪಾಲ ಬಂತೇಜಿ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ ಇತರರು ಇದ್ದರು. ರಾಜೇಂದ್ರ ನಾಲಬಂದ ಪ್ರಾರ್ಥಿಸಿದರು. ಡಾ.ಪಂಚಶೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ಬೇವೂರ ವಂದಿಸಿದರು.

Share This Article

ಜಸ್ಟ್​ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin

Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…

ಸಾಧನೆ ಸಂಭ್ರಮಿಸೋಣ ಸೇವೆಗೆ ಅಣಿಯಾಗೋಣ

ಮೊನ್ನೆಯಷ್ಟೇ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಬಂದಿತು. ಈ ಫಲಿತಾಂಶ ತಂದ ಸಂತಸ ಮತ್ತು ಸಂದೇಶ…

ಅನಾನಸ್​ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips

Health Tips : ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಆಕರ್ಷಕ ಹಳದಿ ಹಣ್ಣಾದ ಅನಾನಸ್,…