ಅಂಬೇಡ್ಕರ್‌ಗೆ ಭಾರತ ರತ್ನ ಕೊಡುವಲ್ಲಿ ಕಾಂಗ್ರೆಸ್ ವಿಫಲ

blank

ಚಿಕ್ಕಮಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆಗಾಗಿ ಬಿ.ಆರ್.ಅಂಬೇಡ್ಕರ್ ಹಲವಾರು ನೋವು, ಅವÀಮಾನವನ್ನು ಸಹಿಸಿಕೊಂಡು ಸಂವಿಧಾನ ರಚಿಸಿ, ಅಮೂಲ್ಯ ಮತದಾನದ ಬ್ರಹ್ಮಸ್ತçವನ್ನು ಜನತೆಗೆ ನೀಡಿ ರಾಷ್ಟçದ ಪರಿವರ್ತನೆಗೆ ಭದ್ರಕೋಟೆ ನಿರ್ಮಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮತದಾನ ಯಾವುದೇ ಸ್ಥಾನಪಲ್ಲಟ ಹಾಗೂ ಭವ್ಯಭಾರತ ನಿರ್ಮಾಣಕ್ಕೆ ಪ್ರಮುಖ ಅಸ್ತç. ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನ ರಚಿಸುವ ಕಾಲಘಟ್ಟದಲ್ಲಿ ಶ್ರೀಮಂತರು, ತೆರಿಗೆ ಕಟ್ಟುವವರಿಗೆ ಸೀಮಿತಗೊಳಿಸದೇ ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಿ ರಾಷ್ಟçದ ಸಮಸ್ತ ವರ್ಗಕ್ಕೂ ಆಸರೆಯಾದರು ಎಂದರು.
ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಸಂವಿಧಾನ ರಚಿಸಿದ ಅಂಬೇಡ್ಕರ್ ಬಡತನ, ಅಸ್ಪÊಶ್ಯತೆ ಹೋಗಲಾಡಿಸಲು ಚುನಾವಣೆ ಅಖಾಡಕ್ಕೆ ಕಾಲಿಟ್ಟರು. ಆದರೆ ಕಾಂಗ್ರೆಸ್ ಕೆಲವು ಕಮ್ಯೂನಿಸ್ಟ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಂಬೇಡ್ಕರ್ ವಿರುದ್ಧವೇ ಪರಿಶಿಷ್ಟರನ್ನು ಎತ್ತಿಕಟ್ಟಿ ಸೋಲಿಸಿ, ಅಪಮಾನಿಸಿದರು ಎಂದು ಹೇಳಿದರು.
ಅಂಬೇಡ್ಕರ್‌ಗೆ ಭಾರತ ರತ್ನ ಕೊಡುವಲ್ಲಿ ಕಾಂಗ್ರೆಸ್ ವಿಫಲತೆ ಹೊಂದಿತು. ಬದುಕಿದ್ದಾಗಲೇ ನೆಹರು, ಇಂದಿರಾಗಾAಧಿ ತಮಗೇ ತಾವೇ ಶ್ರೇಷ್ಟರು ಎಂದು ಭಾರತ ರತ್ನ ಪಡೆದುಕೊಂಡಿತು. ಸ್ಮಾರಕ ವಿಚಾರದಲ್ಲೂ ಕಾಂಗ್ರೆಸ್ ಹಿನ್ನೆಡೆ ತೋರಿತು. ತದನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ೧೯೯೧ರಲ್ಲಿ ಅಧಿಕಾರ ಹಿಡಿದು ಮೊಟ್ಟಮೊದಲು ಸ್ಮಾರಕ ನಿರ್ಮಿಸಿ ಗೌರವ ಸೂಚಿಸಿತು ಎಂದರು.
ಕಾAಗ್ರೆಸ್ ಅಧಿಕಾರ ಉಳಿವು, ವೈಯಕ್ತಿಕ ಸ್ವಾತಂತ್ರÈಕ್ಕಾಗಿ ಸಂವಿಧಾನಕ್ಕೆ ಅನೇಕ ಭಾರಿ ತಿದ್ದುಪಡಿ ಮಾಡಿದೆ. ಇದೀಗ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಭಯದಿಂದ ಸಂವಿಧಾನ ಕೈಪಿಡಿ ಹಿಡಿದುಕೊಂಡಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂವಿಧಾನ ಅಂಬೇಡ್ಕರ್ ರಚನೆಯಲ್ಲ. ಹಿಂದೆಯೇ ರಚಿಸಲಾಗಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಆಶಯಕ್ಕೆ ಕೊಡಲಿಪೆಟ್ಟು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರು ಭಾರತಾಂಬೆಗೆ ಸೂಚಿಸುವ ಗೌರವ ಅಂಬೇಡ್ಕರ್‌ಗೂ ಸೂಚಿಸುತ್ತಾರೆ. ಆದ್ದರಿಂದಲೇ ಅಂಬೇಡ್ಕರ್‌ಗೆ ಭಾರತ ರತ್ನವನ್ನು ವಾಜಪೇಯಿ ನೀಡಿದರು. ಅಂಬೇಡ್ಕರ್ ಸಾವಿನ ವೇಳೆ ಕಾಂಗ್ರೆಸ್ ಸ್ಥಳ ನೀಡಲಿಲ್ಲ. ಬಳಿಕ ಅಂತ್ಯಸAಸ್ಕಾರ ಕಡಲತೀರದಲ್ಲಿ ನಡೆಯಿತು. ಇದೀಗ ಮೋದಿ ಸರ್ಕಾರ ಅಂಭೇಡ್ಕರ್ ಸಂಬAಧಿಸಿದ ಒಂದೊAದು ಸ್ಥಳವನ್ನು ಸಮಾನತೆ ಸಾರುವ ಸ್ಥಳವಾಗಿ ಮಾರ್ಪಾಡಿಸುತ್ತಿದೆ ಎಂದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ನೋವು, ಶೋಷಣೆಯಿಂದ ಒಳಗಾಗಿದ್ಧ ಕಾಲದಲ್ಲಿ ದೇಶದ ಜನತೆಗೆ ಮಹಿಳಾ ಸಬಲೀಕರಣಕ್ಕೆ ಮೀಸಲಾತಿ ಹಾಗೂ ಮತದಾನದ ಅಸ್ತç ವನ್ನು ಅಂಬೇಡ್ಕರ್ ನೀಡಿದ್ದು, ಆಸೆಆಮಿಷಕ್ಕೆ ಒಳಗಾಗದೇ ಸಮರ್ಪಕ ನಾಯಕರನ್ನು ಗುರುತಿಸುವ ಮಹತ್ತ ರ ಜವಾಬ್ದಾರಿ ಪರಿಶಿಷ್ಟರಲ್ಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಅಂಬೇಡ್ಕರ್ ಜಯಂತಿ ಸಮಾರಂಭಗಳಿಗೆ ಕಾರ್ಯಕರ್ತರು ಸೀಮಿತಗೊಳಿಸದೇ ಗ್ರಾಮೀಣ ಪ್ರದೇಶದ ದಲಿತರ ಕೇರಿಗಳಿಗೆ ತೆರಳಿ ಅಂಬೇಡ್ಕರ್ ವಿಚಾರಧಾರೆ ಮನದಟ್ಟು ಮಾಡಬೇಕು. ನಿರಂತರ ಜನತೆಯೊಂದಿಗೆ ಸಂ ಪರ್ಕ ಇಟ್ಟುಕೊಂಡು ವಿಚಾರ ಮಂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಹಿಳಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಸಭೆ ಉಪಾಧ್ಯಾಕ್ಷೆ ಅನು ಮಧುಕರ್, ಸದಸ್ಯೆ ರೂಪ, ಮುಖಂಡರಾದ ಕೆಂಪನಹಳ್ಳಿ ಪುಷ್ಪರಾಜ್, ಕೋಟೆ ರಂಗನಾಥ್, ಸೋಮಶೇಖರ್, ಎಚ್.ಕೆ.ಕೇಶವಮೂರ್ತಿ, ಬಿ.ರಾಜಪ್ಪ, ನಾಗರಾಜ್, ನೆಟ್ಟೆಕೆರೆಹಳ್ಳಿ ಜಯಣ್ಣ, ಸಂತೋಷ್ ಕೋಟ್ಯಾನ್, ದುರ್ಗೇಶ್, ರೇವ್‌ನಾಥ್ ಮತ್ತಿತರರು ಉಪಸ್ಥಿತರಿದ್ದರು.

Share This Article

ಬೇಸಿಗೆಯಲ್ಲಿ ಕೊತ್ತಂಬರಿ, ಪುದೀನ ಒಣಗುತ್ತಿದೆಯೇ? ತಾಜಾವಾಗಿಡಲು ಈ ರೀತಿ ಮಾಡಿ | Summer

Summer: ಜನರು ಬೇಸಿಗೆಯಲ್ಲಿ ತಮ್ಮ ದೇಹವನ್ನು ತಂಪಾಗಿಡಲು ಪುದೀನ ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನ ಮತ್ತು…

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…